ವಿಷಯಕ್ಕೆ ಹೋಗಿ

46.ಕನ್ನಡದ ಮೊದಲ ‘ವಿಂಡೋಸ್ ಆಧಾರಿತ’ ಉಚಿತ ಸ್ಕ್ರಿಪ್ಟ್‌ಸಾಫ್ಟ್‌ವೇರ್ : ‘ಬರಹ’ ತಂತ್ರಾಂಶದ ಇತಿಹಾಸ


ಆರಂಭದಲ್ಲಿ ಕನ್ನಡದ ಸರಳ ಲಿಪಿತಂತ್ರಾಂಶವಾಗಿದ್ದ ಬರಹಕಾಲಕ್ರಮೇಣ ಭಾರತೀಯ ಭಾಷಾಲಿಪಿ ತಂತ್ರಾಂಶವಾಗಿ ಅಭಿವೃದ್ಧಿಗೊಂಡಿತು. ಪ್ರಸ್ತುತ, ಬಹುತೇಕ ಭಾರತೀಯ ಭಾಷೆಗಳನ್ನು ಈ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಬಳಕೆಯ ಸರಳತೆ ಹೊಂದಿರುವ ಮತ್ತು ತಾಂತ್ರಿಕವಾಗಿ ಸದೃಢವಾದ ಈ ತಂತ್ರಾಂಶವು ಬಹುಜನಪ್ರಿಯವಾಗಿದ್ದು ಜಗತ್ತಿನಾದ್ಯಂತ ಲಕ್ಷಾಂತರ ಜನರು ಇದನ್ನು ಬಳಸುತ್ತಿದ್ದಾರೆ. ಬಳಕೆಗೆ ಸುಲಭವಾದ ವೈವಿಧ್ಯಮಯವಾದ, ಕೀಲಿಮಣೆ ವಿನ್ಯಾಸಗಳು (ಕೀಬೋರ್ಡ್ ಲೇಔಟ್) ಮತ್ತು ಹಳೆಯ ANSI, ಹೊಸ ಯೂನಿಕೋಡ್ ಎನ್‌ಕೋಡಿಂಗ್ ಶಿಷ್ಟತೆಯುಳ್ಳ ವೈವಿಧ್ಯಮಯ ಫಾಂಟುಗಳನ್ನು ನೀಡಲಾಗಿದೆ. ಬೆಂಗಳೂರು ಮೂಲಕ ಅಮೆರಿಕಾ ನಿವಾಸಿಯಾದ ಶ್ರೀ ಶೇಷಾದ್ರಿವಾಸು ಚಂದ್ರಶೇಖರನ್ ಈ ತಂತ್ರಾಂಶವನ್ನು ಅಭಿವೃದ್ಧಿಗೊಳಿಸಿಕೊಂಡು ಬರುತ್ತಿದ್ದಾರೆ. ೧೯೯೮ರಿಂದ ೨೦೧೦ರವರೆಗೆ ಒಟ್ಟು ೧೦ ಆವೃತ್ತಿಗಳು ಹೊರಬಂದಿವೆ. ೯ನೆಯ ಆವೃತ್ತಿಯವರೆಗೆ ಇದು ಉಚಿತ ತಂತ್ರಾಂಶವಾಗಿತ್ತು. ಕನ್ನಡದ ಮೊದಲ ವಿಂಡೋಸ್ ಆಧಾರಿತ ಉಚಿತ ಲಿಪಿತಂತ್ರಾಂಶಎಂಬ ಹೆಗ್ಗಳಿಕೆ ಹೊಂದಿದ್ದ ಬರಹ ತನ್ನ ೧೦ನೇ ಆವೃತ್ತಿಯಿಂದ ಪಾವತಿಸಿ ಬಳಸುವ ತಂತ್ರಾಂಶವಾಗಿದೆ.  http://www.baraha.com ಜಾಲತಾಣದಿಂದ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಬರಹದಲ್ಲಿ ಟೈಪ್ ಮಾಡಿ ಸಿದ್ಧಪಡಿಸಿದ ಭಾಷಾಪಠ್ಯವನ್ನು ಬ್ರೈಲ್ ಲಿಪಿಗೆ ಪರಿವರ್ತಿಸಿ ಮುದ್ರಿಸಬಹುದು. ಇದು ಈ ತಂತ್ರಾಂಶದ ವಿಶೇಷವಾಗಿದೆ. ಹಳೆಯ ಬೇರೆಬೇರೆ ಲಿಪಿತಂತ್ರಾಂಶಗಳಲ್ಲಿ ಸಿದ್ಧಪಡಿಸಿದ ಮಾಹಿತಿಗಳನ್ನು ಆಧುನಿಕ ಎನ್‌ಕೋಡಿಂಗ್‌ಗೆ ಪರಿವರ್ತನೆ ಸಾಧ್ಯ. ಹಳೆಯ ಫಾಂಟ್‌ಗಳಿಗೆ ಪರಸ್ಪರ ಪರಿವರ್ತನೆ ಇದರಲ್ಲಿ ಸುಲಭ.
                               
ಬರಹ ತಂತ್ರಾಂಶ ಕಾಲಕ್ರಮೇಣ ನಾನಾ ಸೌಲಭ್ಯಗಳ ಸಹಿತ ಅಭಿವೃದ್ಧಿಗೊಳ್ಳುತ್ತಾ ಬಂದಿದೆ. ಬರಹದ ಮೊದಲ ಆವೃತ್ತಿ ೧೯೯೮ರಲ್ಲಿ ಲೋಕಾರ್ಪಣೆಗೊಂಡಿತು. ಅದು, ಇಂಗ್ಲಿಷ್ ಟೈಪ್‌ಮಾಡಿ ಕನ್ನಡನ್ನು ಮೂಡಿಸುವ ಲಿಪ್ಯಂತರಣ ವ್ಯವಸ್ಥೆಯಿದ್ದ ಒಂದು ಎಡಿಟರ್ ಆಗಿತ್ತು. ಕನ್ನಡದ ಉಚ್ಚಾರಣೆಯನ್ನು ಆಧರಿಸಿ ಇಂಗ್ಲಿಷ್ ಲಿಪಿಯನ್ನು ಬೆರಳಚ್ಚಿಸಿದರೆ ಕನ್ನಡ ಪದಗಳು ಮೂಡುವಂತೆ ಇರುವ ಕೀಲಿಮಣೆ ವಿನ್ಯಾಸವಿತ್ತು. ಈ ವಿನ್ಯಾಸವು ಕನ್ನಡ ತಿಳಿದಿರುವ ಮತ್ತು ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಬಹಳ ಸುಲಭವಾಗಿತ್ತು. ಆ ಕಾರಣ ಈ ತಂತ್ರಾಂಶ ಜಗತ್ತಿನಾದ್ಯಂತ ಜನಪ್ರಿಯವಾಯಿತು.

                ಬಳಕೆಯ ಹಿಮ್ಮಾಹಿತಿ ಆಧರಿಸಿ, ಇಂಗ್ಲಿಷ್ ಅಲ್ಲದೆ, “ಕನ್ನಡದ ಯೂಸರ್ ಇಂಟರ್‌ಫೇಸ್ನ್ನು ಆಯ್ಕೆಮಾಡಿಕೊಳ್ಳುವ ಸೌಲಭ್ಯವಿರುವ ಬರಹ ೧.೧ಆವೃತ್ತಿಯು ೧೯೯೮ರಲ್ಲಿ ಬಿಡುಗಡೆಯಾಯಿತು.  ಕೇವಲ ಬರಹ ಎಡಿಟರ್‌ಗೆ ಬದಲಾಗಿ ವಿಂಡೋಸ್‌ನ ಯಾವುದೇ ಅಪ್ಲಿಕೇಷನ್ ಸಾಫ್ಟ್‌ವೇರ್‌ನಲ್ಲಿ ನೇರವಾಗಿ ಕನ್ನಡವನ್ನು ಟೈಪ್‌ಮಾಡಲು ಸಾಧ್ಯವಾಗುವಂತೆ ಬರಹ ಡೈರೆಕ್ಟರ್ಅಥವಾ ನೇರ ಬರಹಎಂದು ಕರೆಯಲಾಗುವ ಸೌಲಭ್ಯವನ್ನು ೧೯೯೯ರಲ್ಲಿ ಬಿಡುಗಡೆಗೊಳಿಸಿದ ಬರಹ ೨.೦ಆವೃತ್ತಿಯಲ್ಲಿ ಅಳವಡಿಸಲಾಯಿತು. ಇದರಲ್ಲಿ ಕೈಬರಹ ರೂಪದ ಹೊಸ ಫಾಂಟನ್ನು ನೀಡಲಾಯಿತು. ಎಡಿಟರ್‌ನಲ್ಲಿ ಬೆರಳಚ್ಚಿಸಿದ ಕನ್ನಡ ಪಠ್ಯವನ್ನು, ಮೇಯ್ಲ್ ಅಟ್ಯಾಚ್‌ಮೆಂಟ್ ಕಳುಹಿಸಲು ಅನುವಾಗುವಂತೆ, ಜಿಫ಼್ ಮತ್ತು ಬಿಎಂಪಿ ನಮೂನೆಗಳಲ್ಲಿ ಚಿತ್ರರೂಪವಾಗಿ ಉಳಿಸುವ ಸೌಲಭ್ಯವಿತ್ತು. 

                ಹಿಂದಿ, ಸಂಸ್ಕೃತ ಮತ್ತು ಮರಾಠಿ ಭಾಷೆಗಳ ಪಠ್ಯವನ್ನು ಬರಹ ಎಡಿಟರ್ನಲ್ಲಿ ಟೈಪ್‌ಮಾಡಲಾಗುವಂತೆ ದೇವನಾಗರಿ ಲಿಪಿಯನ್ನು ಇದರಲ್ಲಿ ಅಳವಡಿಸಿ, ‘ಬರಹ ೨೦೦೦ಆವೃತ್ತಿಯನ್ನು ೨೦೦೦ರಲ್ಲಿ ಬಿಡುಗಡೆ ಮಾಡಲಾಯಿತು. ಅಂತರಜಾಲದಲ್ಲಿ ಬರಹ ಡಾಟ್ ಕಾಂಹೆಸರಿನ ಜಾಲತಾಣವನ್ನು ಆರಂಭಿಸಿ, ಈ ತಂತ್ರಾಂಶವನ್ನು ವಿಶ್ವಕ್ಕೇ ಉಚಿತವಾಗಿ ವಿತರಿಸುವ ಪ್ರಯತ್ನವನ್ನು ಆರಂಭಿಸಲಾಯಿತು. ಬರಹ ಬಳಸಿ ಸಿದ್ಧಪಡಿಸಲಾದ ದಸ್ತಾವೇಜುಗಳನ್ನು ಅಂತರಜಾಲದಲ್ಲಿ ಹುಡುಕಿ ಪಡೆಯಲು ಅನುವಾಗುವಂತೆ ಹೈಪರ್‌ಲಿಂಕ್‌ಗಳನ್ನು ಎಂಬೆಡ್ ಮಾಡುವ ಅವಕಾಶವನ್ನು ಮೊದಲಿಗೆ ಈ ಆವೃತ್ತಿಯಲ್ಲಿ ನೀಡಲಾಯಿತು. ಯಾವುದೇ ವಿಂಡೋಸ್ ಆನ್ವಯಿಕದಲ್ಲಿ ಭಾಷಾ ಪಠ್ಯವನ್ನು ಬೆರಳಚ್ಚಿಸಿ ಬಳಸುವ ಸೌಲಭ್ಯ ನೀಡುವ ಬರಹ ಡೈರೆಕ್ಟ್ಹೆಸರಿನ ಎಂಜಿನ್ಕನ್ನಡಕ್ಕೆ ಮಾತ್ರ ಸೀಮಿತವಾಗಿತ್ತು, ೨೦೦೦ರಲ್ಲಿ ಬಿಡುಗಡೆಯಾದ ಬರಹ ೨೦೦೦ಎಎಂಬ ಆವೃತ್ತಿಯಲ್ಲಿ ಈ ಎಂಜಿನ್‌ಗೆ ಇತರ ಭಾಷೆಗಳ ಲಿಪಿಗಳನ್ನು ಅಳವಡಿಸಿ ಬಳಕೆಯ ಸೌಲಭ್ಯಗಳನ್ನು ಇನ್ನಷ್ಟು ವಿಸ್ತರಿಸಲಾಯಿತು.  ಹಿಂದಿನ ಆವೃತ್ತಿಗಳಲ್ಲಿ, ಕನ್ನಡದಲ್ಲಿ ಮೂಡುವ ಪದಗಳನ್ನು, ಮೊದಲಿಗೆ ಇಂಗ್ಲಿಷ್ ಲಿಪಿಯಲ್ಲಿ ಬೆರಳಚ್ಚಿಸಬೇಕಾದ ಕಾರಣ, ಕಾಗುಣಿತ ತಪ್ಪುಗಳನ್ನು ತಿದ್ದಲು ಅಂತಹ ಪದಗಳನ್ನು ಇಂಗ್ಲಿಷ್ ಪಠ್ಯದಲ್ಲಿ ಹುಡುಕಿ ತೆಗೆಯುವ ಪ್ರಯತ್ನ ಕಷ್ಟಕರವಾಗಿತ್ತು. ತಪ್ಪಾದ ಕನ್ನಡದ ಪದವನ್ನು ಹೈಲೈಟ್ ಮಾಡಿದ ತಕ್ಷಣ ಅದರ ಇಂಗ್ಲಿಷ್ ರೂಪದ ಪದವು ತಾನಾಗಿಯೇ ಹೈಲೈಟ್ ಆಗುವ ಸೌಲಭ್ಯವನ್ನು ಬರಹ ೨೦೦೦ಎಆವೃತ್ತಿಯಲ್ಲಿ ನೀಡಲಾಯಿತು.

                ಕರ್ನಾಟಕ ಸರಕಾರವು ಸಿದ್ಧಪಡಿಸಿ ಘೋಷಿಸಿದ ಕೀಲಿಮಣೆ ವಿನ್ಯಾಸ ಮತ್ತು ಗ್ಲಿಫ಼್ ಮಾನಕಗಳ ಅನುಸಾರ ಕನ್ನಡ ಪಠ್ಯವು ಸಿದ್ಧಗೊಳ್ಳುವಂತೆ ಬರಹ ತಂತ್ರಾಂಶವನ್ನು ಪರಿಷ್ಕರಿಸಿ ಬರಹ ೪.೦ಆವೃತ್ತಿಯನ್ನು ೨೦೦೧ರಲ್ಲಿ, ಹೆಚ್ಚುವರಿ ಫ಼ಾಂಟ್‌ಗಳ ಸಹಿತ ಬಿಡುಗಡೆಗೊಳಿಸಲಾಯಿತು. ೨೦೦೩ರಲ್ಲಿ ಬಿಡುಗಡೆಯಾದ ಬರಹ ೫.೦ಆವೃತ್ತಿಯಲ್ಲಿ ಗ್ರಾಹಕೀಕೃತ ಆನ್ವಯಿಕ ತಂತ್ರಾಂಶಗಳಲ್ಲಿ ಕನ್ನಡದ ಪಠ್ಯವನ್ನು ಬೆರಳಚ್ಚಿಸುವ ವ್ಯವಸ್ಥೆಯನ್ನು ಅಳವಡಿಸಲು ಅವಕಾಶ ಕಲ್ಪಿಸುವ ಸೌಲಭ್ಯವನ್ನು ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕಿಟ್ (ಎಸ್.ಡಿ.ಕೆ.) ನೀಡಲಾಯಿತು. ದತ್ತಸಂಸ್ಕರಣಾ (ಡೇಟಾಬೇಸ್) ತಂತ್ರಾಂಶಗಳಲ್ಲಿನ ಪಠ್ಯವನ್ನು ಅಕ್ಷರಾನುಕ್ರಮಣಿಕೆಯಲ್ಲಿ ವಿಂಗಡಿಸುವ ಸೌಲಭ್ಯ, ಒಂದು ಫ಼ಾಂಟ್ ಎನ್‌ಕೋಡಿಂಗ್‌ನಿಂದ ಮತ್ತೊಂದು ಫ಼ಾಂಟ್ ಎನ್‌ಕೋಡಿಂಗ್‌ಗೆ ಪಠ್ಯವನ್ನು ಬದಲಾಯಿಸಲು ಪರಿವರ್ತಕ ಸೌಲಭ್ಯ, ಇತರ ವಿಂಡೋಸ್ ಅಪ್ಲಿಕೇಷನ್‌ಗಳಲ್ಲಿ ಸಿದ್ಧವಾದ ಪಠ್ಯವನ್ನು ಬರಹ ಎಡಿಟರ್‌ಗೂ, ಬರಹ ಎಡಿಟರ್‌ನಲ್ಲಿ ಸಿದ್ಧವಾದ ಪಠ್ಯವನ್ನು ಇತರ ಆನ್ವಯಿಕಗಳಿಗೂ ಪರಸ್ಪರ ವರ್ಗಾಂತರಿಸುವ ಸೌಲಭ್ಯ - ಇವು ಬರಹದ ಈ ಆವೃತ್ತಿಯಲ್ಲಿನ ಎಸ್.ಡಿ.ಕೆ.ಯ ಪ್ರಮುಖ ಸೌಲಭ್ಯಗಳು.

                ಕನ್ನಡ ಮತ್ತು ದೇವನಾಗರಿ ಲಿಪಿಗಳ ಜೊತೆಗೆ, ದಕ್ಷಿಣ ಭಾರತದ ಇತರೆ ಭಾಷೆಗಳಾದ ತಮಿಳು, ತೆಲುಗು ಮತ್ತು ಮಲೆಯಾಳಂ ಲಿಪಿಗಳನ್ನೂ ಬಳಸುವಂತೆ ಸೌಲಭ್ಯಗಳನ್ನು ಸೇರಿಸಿ, ‘ಬರಹ ೬.೦ಆವೃತ್ತಿಯನ್ನು ೨೦೦೪ರಲ್ಲಿ ಬಿಡುಗಡೆಗೊಳಿಸಲಾಯಿತು. ಇತರ ವಿಂಡೋಸ್ ಆನ್ವಯಿಕಗಳು ಮತ್ತು ಬರಹ ಎಡಿಟರ್ ನಡುವೆ ಭಾರತೀಯ ಭಾಷೆಗಳ ಪಠ್ಯವನ್ನು, ANSI, ಯೂನಿಕೋಡ್, ರಿಚ್‌ಟೆಕ್ಸ್ಟ್ ಫಾರ‍್ಮಾಟ್, ಮತ್ತು ಹೆಚ್‌ಟಿಎಂಎಲ್ - ಇಂತಹ ವಿವಿಧ ನಮೂನೆಗಳಲ್ಲಿ ಪಠ್ಯವನ್ನು ಪರಸ್ಪರ ವರ್ಗಾಂತರಿಸಬಹುದು. ಬರಹ ಎಡಿಟರ್ ಬಳಸಿ ಇಂಗ್ಲಿಷ್ ಲಿಪಿಯಲ್ಲಿ ಬೆರಳಚ್ಚಿಸಿರುವ ಭಾರತೀಯ ಭಾಷಾ ಪಠ್ಯವನ್ನು ಯಾವುದೇ ಭಾಷೆಯಲ್ಲಿ ನೋಡಲು ಸ್ಕ್ರಿಪ್ಟ್ ಓವರ್‌ರೈಡ್ಸೌಲಭ್ಯವನ್ನು ಬಳಸಬಹುದು. ಈ ಸ್ಕ್ರಿಪ್ಟ್ ಓವರ್‌ರೈಡ್ಎಂಬುದು ಒಂದು ಭಾಷೆಯ ಲಿಪಿಯಿಂದ ಮತ್ತೊಂದು ಭಾಷೆಯ ಲಿಪಿಗೆ ಪಠ್ಯವನ್ನು ತಕ್ಷಣದಲ್ಲಿಯೇ ಬದಲಿಸುವ ಸೌಲಭ್ಯವಾಗಿದೆ.

                ೨೦೦೬ರಲ್ಲಿ ಬರಹ ೭.೦ಆವೃತ್ತಿ ಹೊರಬಂತು. ಇದರಲ್ಲಿ ಗುಜರಾತಿ, ಗುರುಮುಖಿ, ಬೆಂಗಾಳಿ ಮತ್ತು ಒರಿಯಾ ಭಾಷೆಗಳ ಲಿಪಿಗಳಿಗೆ ಬಳಕೆಯ ಬೆಂಬಲವನ್ನು ನೀಡಲಾಯಿತು. ಎಲ್ಲಾ ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಟೈಪ್‌ಮಾಡಿ ಸೇವ್ ಮಾಡಿಕೊಳ್ಳಬಹುದಾದ ಬರಹ ಪ್ಯಾಡ್ಎಂಬ ಹೆಸರಿನ ಒಂದು ಸರಳವಾದ ಯೂನಿಕೋಡ್ ಎಡಿಟರ್ನ್ನು ಇದೆ.  ANSI ಎನ್‌ಕೋಡಿಂಗ್ ಇರುವ ಪಠ್ಯವನ್ನು, ಬೇರೆ ಬೇರೆ ಹೆಸರಿನ ಫ಼ಾಂಟ್‌ಗಳಿಗೆ ಪರಸ್ಪರ ಪರಿವರ್ತನೆ ಸೌಲಭ್ಯವನ್ನು ಕಲ್ಪಿಸುವ ಬರಹ ಫ಼ಾಂಟ್ ಕನ್‌ವರ್ಟ್ಮತ್ತು ANSI ಎನ್‌ಕೋಡಿಂಗ್‌ನಿಂದ ಯೂನಿಕೋಡ್ ಎನ್‌ಕೋಡಿಂಗ್‌ಗೆ ಪರಿವರ್ತಿಸುವ ಬರಹ ಕನ್‌ವರ್ಟ್ಸೌಲಭ್ಯಗಳನ್ನು ಉನ್ನತೀಕರಿಸಿ ಈ ಆವೃತ್ತಿಯಲ್ಲಿ ನೀಡಲಾಗಿದೆ.  ಈ ಹಿಂದಿನ ಆವೃತ್ತಿಗಳಲ್ಲಿ ಈ ಸೌಲಭ್ಯವನ್ನು, ಸೀಮಿತ ಪಠ್ಯಕ್ಕೆ ಮಾತ್ರ ಬಳಸಬಹುದಾಗಿತ್ತು. ಟೆಕ್ಸ್ಟ್ ಅಥವಾ ಆರ್‌ಟಿಎಫ್ ರೂಪದ ಕಡತಗಳನ್ನು, ಪಠ್ಯದ ಪುಟಗಳಿಗೆ ಮಿತಿಯಿಲ್ಲದಂತೆ, ನೇರವಾಗಿ ಪರಿವರ್ತನೆಯನ್ನು ಮಾಡಬಹುದಾದ ಕಮಾಂಡ್ ಲೈನ್ ಯುಟಿಲಿಟಿಗಳನ್ನು ಈ ಆವೃತ್ತಿಯಲ್ಲಿ ನೀಡಲಾಗಿದೆ. ಒಂದು ಭಾರತೀಯ ಭಾಷೆಯ ಲಿಪಿಯಿಂದ ಮತ್ತೊಂದು ಭಾರತೀಯ ಭಾಷೆಗೆ ನೇರ ಲಿಪ್ಯಂತರಣದ ಜೊತೆಗೆ, ಲ್ಯಾಟಿನ್ ಲಿಪಿ ರೂಪದ ಪಠ್ಯವನ್ನು ಪಡೆಯಲು ಪರಿವರ್ತನಾ ಸೌಲಭ್ಯವನ್ನು ಈ ಆವೃತ್ತಿಯಲ್ಲಿ ನೀಡಲಾಗಿದೆ.

ಬರಹ ೮ ಮತ್ತು ೯ ನೆಯ ಆವೃತ್ತಿಗಳೂ ಸೇರಿದಂತೆ ಹಳೆಯ ಆವೃತ್ತಿಗಳು ಈಗ ಡೌನ್‌ಲೋಡ್‌ಗೆ ಲಭ್ಯವಿಲ್ಲ. ಈಗಾಗಲೇ ಅದನ್ನು ಬಳಸುತ್ತಿರುವವರಿಂದ ಪಡೆದು ಉಚಿತ ಬಳಕೆಯನ್ನು ಮುಂದುವರೆಸಬಹುದು. ಬರಹ-೧೦ ಆವೃತ್ತಿಯನ್ನು ಮೊದಲಿಗೆ ಡೌನ್‌ಲೋಡ್‌ಮಾಡಿಕೊಂಡು, ನಂತರ, ಟ್ರಯಲ್ ಆವೃತ್ತಿಯನ್ನು ಸಕ್ರಿಯಗೊಳಿಸಿಕೊಳ್ಳಬಹುದು ಅಥವಾ ನಿಗದಿತ ದರವನ್ನು ಪಾವತಿಸಿ ಪ್ರಾಡಕ್ಟ್ ಕೀಯನ್ನು ಪಡೆದು ಅದನ್ನು ನಮೂದಿಸಿ ಪರವಾನಿಗೆಯನ್ನು ಸಕ್ರಿಯಗೊಳಿಸಬಹುದು. ಒಮ್ಮೆ ಪರವಾನಗಿ ಪಡೆದರೆ ಸಾಕು ಜೀವಮಾನದಾದ್ಯಂತ ಅದನ್ನು ಬಳಸಬಹುದು ಎನ್ನುತ್ತದೆ ಬರಹ ಡಾಟ್ ಕಾಂ ಜಾಲತಾಣ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...