ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

46.ಕನ್ನಡದ ಮೊದಲ ‘ವಿಂಡೋಸ್ ಆಧಾರಿತ’ ಉಚಿತ ಸ್ಕ್ರಿಪ್ಟ್‌ಸಾಫ್ಟ್‌ವೇರ್ : ‘ಬರಹ’ ತಂತ್ರಾಂಶದ ಇತಿಹಾಸ

ಆರಂಭದಲ್ಲಿ ಕನ್ನಡದ ಸರಳ ಲಿಪಿತಂತ್ರಾಂಶವಾಗಿದ್ದ ‘ ಬರಹ ’ ಕಾಲಕ್ರಮೇಣ ಭಾರತೀಯ ಭಾಷಾಲಿಪಿ ತಂತ್ರಾಂಶವಾಗಿ ಅಭಿವೃದ್ಧಿಗೊಂಡಿತು. ಪ್ರಸ್ತುತ , ಬಹುತೇಕ ಭಾರತೀಯ ಭಾಷೆಗಳನ್ನು ಈ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಬಳಕೆಯ ಸರಳತೆ ಹೊಂದಿರುವ ಮತ್ತು ತಾಂತ್ರಿಕವಾಗಿ ಸದೃಢವಾದ ಈ ತಂತ್ರಾಂಶವು ಬಹುಜನಪ್ರಿಯವಾಗಿದ್ದು ಜಗತ್ತಿನಾದ್ಯಂತ ಲಕ್ಷಾಂತರ ಜನರು ಇದನ್ನು ಬಳಸುತ್ತಿದ್ದಾರೆ. ಬಳಕೆಗೆ ಸುಲಭವಾದ ವೈವಿಧ್ಯಮಯವಾದ , ಕೀಲಿಮಣೆ ವಿನ್ಯಾಸಗಳು (ಕೀಬೋರ್ಡ್ ಲೇಔಟ್) ಮತ್ತು ಹಳೆಯ ANSI, ಹೊಸ ಯೂನಿಕೋಡ್ ಎನ್‌ಕೋಡಿಂಗ್ ಶಿಷ್ಟತೆಯುಳ್ಳ ವೈವಿಧ್ಯಮಯ ಫಾಂಟುಗಳನ್ನು ನೀಡಲಾಗಿದೆ. ಬೆಂಗಳೂರು ಮೂಲಕ ಅಮೆರಿಕಾ ನಿವಾಸಿಯಾದ ಶ್ರೀ ಶೇಷಾದ್ರಿವಾಸು ಚಂದ್ರಶೇಖರನ್ ಈ ತಂತ್ರಾಂಶವನ್ನು ಅಭಿವೃದ್ಧಿಗೊಳಿಸಿಕೊಂಡು ಬರುತ್ತಿದ್ದಾರೆ. ೧೯೯೮ರಿಂದ ೨೦೧೦ರವರೆಗೆ ಒಟ್ಟು ೧೦ ಆವೃತ್ತಿಗಳು ಹೊರಬಂದಿವೆ. ೯ನೆಯ ಆವೃತ್ತಿಯವರೆಗೆ ಇದು ಉಚಿತ ತಂತ್ರಾಂಶವಾಗಿತ್ತು. “ ಕನ್ನಡದ ಮೊದಲ ವಿಂಡೋಸ್ ಆಧಾರಿತ ಉಚಿತ ಲಿಪಿತಂತ್ರಾಂಶ ” ಎಂಬ ಹೆಗ್ಗಳಿಕೆ ಹೊಂದಿದ್ದ ಬರಹ ತನ್ನ ೧೦ನೇ ಆವೃತ್ತಿಯಿಂದ ಪಾವತಿಸಿ ಬಳಸುವ ತಂತ್ರಾಂಶವಾಗಿದೆ.   http://www.baraha.com ಜಾಲತಾಣದಿಂದ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಬರಹದಲ್ಲಿ ಟೈಪ್ ಮಾಡಿ ಸಿದ್ಧಪಡಿಸಿದ ಭಾಷಾಪಠ್ಯವನ್ನು ಬ್ರೈಲ್ ಲಿಪಿಗೆ ಪರಿವರ್ತಿಸಿ ಮುದ್ರಿಸಬಹುದು. ಇದು ಈ ತಂತ್ರಾಂಶದ ವಿಶೇಷವಾಗಿದೆ. ಹಳೆಯ ಬೇರೆಬ...

45.ಸರ್ಕಾರದ ಇಲಾಖೆಗಳಲ್ಲಿನ ಸಮನ್ವಯದ ಕೊರತೆ : ಮರೀಚಿಕೆಯಾದ “ಕನ್ನಡ ವಾಸ್ತವೋಪಮ ವಿಶ್ವವಿದ್ಯಾಲಯ”

ಸರ್ಕಾರದ ಆಡಳಿತದಲ್ಲಿ ಡಿಜಿಟಲ್ ಕನ್ನಡದ ಅಭಿವೃದ್ಧಿ ಮತ್ತು ಅನುಷ್ಠಾನದ ಹೊಣೆಗಾರಿಕೆ ಯಾರದು ? ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಾ ಹೋದರೆ , ಗೊಂದಲ ಹೆಚ್ಚಾಗುತ್ತದೆಯೇ ಹೊರತು , ಯಾವುದೂ ಸ್ಪಷ್ಟವಾಗುವುದಿಲ್ಲ. ಸರ್ಕಾರದ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಮತ್ತು ಅಧಿಕಾರಿಗಳಲ್ಲಿ ಆಸಕ್ತಿಯ ಕೊರತೆ ಮತ್ತು ತಜ್ಞತೆಯ ಕೊರತೆಗಳು ಎದ್ದುಕಾಣುತ್ತವೆ. ಡಿಜಿಟಲ್ ಕನ್ನಡ ಅಭಿವೃದ್ಧಿ ಮತ್ತು ಅನುಷ್ಠಾನಕ್ಕಾಗಿ ಶಿಫಾರಸ್ಸುಗಳನ್ನು ಮಾಡುವ ಸಂಸ್ಥೆಯಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವಿದೆ. ಅನುಷ್ಠಾನವನ್ನು ಮಾಡುವ ಹೊಣೆಗಾರಿಕೆಯು ‘ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ’ ( ಡಿಪಿಎಆರ್) ಹಾಗೂ ‘ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ’ ಈ ಎರಡು ಇಲಾಖೆಗಳಲ್ಲಿ ಹಂಚಿಹೋಗಿದೆ. ಡಾ.ಕೆ.ಚಿದಾನಂದಗೌಡ ಸಮಿತಿಯ ವರದಿಯ ಶಿಫಾರಸ್ಸುಗಳನ್ನು ಯಾವ ಇಲಾಖೆಯ ಮೂಲಕ ಅನುಷ್ಠಾನಗೊಳಿಸಬೇಕು ಎಂಬುದು ಇನ್ನೂ ಗೊಂದಲದಲ್ಲಿಯೇ ಇದೆ. ಆದರೆ , ಯಾವ ಇಲಾಖೆಯೂ ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ತಮಿಳು ವಾಸ್ತವೋಪಮ (ವರ್ಚುವಲ್) ವಿಶ್ವವಿದ್ಯಾಲಯದ ಮಾದರಿಯಲ್ಲಿ ಕನ್ನಡದಲ್ಲೂ ವಾಸ್ತವೋಪಮ ವಿಶ್ವವಿದ್ಯಾಲಯವನ್ನು ಆರಂಭಿಸಲಾಗುವುದು ಎಂದು ಸರಕಾರವು ಘೋಷಿಸಿದೆ.   ಆದರೆ , ಈ ಬಗ್ಗೆ ಸರಕಾರದ ಯಾವ ಯಾವ ಇಲಾಖೆಗಳು ಏನೆಲ್ಲ ಮಾಡಿವೆ ಎಂಬುದನ್ನು ಹುಡುಕುತ್ತಾ ಹೋದರೆ ದೊರೆಯುವ ಮಾಹಿತಿಗಳು ನಿರಾಶಾದಾಯಕವಾಗಿವೆ. “ ಕನ್ನಡಕ್ಕ...

44.ಕನ್ನಡ ತಂತ್ರಾಂಶ ಅಭಿವೃದ್ಧಿ : ಅನುಷ್ಠಾನವಾಗದ ಡಾ.ಕೆ.ಚಿದಾನಂದಗೌಡ ಸಮಿತಿಯ ವರದಿ

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಕನ್ನಡ ತಂತ್ರಾಂಶ ಕ್ಷೇತ್ರದ ಬಹುಆಯಾಮಗಳನ್ನು ಮತ್ತು ಕನ್ನಡಕ್ಕೆ ಆಗಲೇಬೇಕಾದ ಕೆಲಸಕಾರ್ಯಗಳ ಅವಶ್ಯಕತೆಗಳ ಕುರಿತು   ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರರಿಗೆ ತಮ್ಮದೇ ಆದ ರೀತಿಯಲ್ಲಿ ವಿವರಿಸಿ ಮನವರಿಕೆ ಮಾಡಿಕೊಟ್ಟಿದ್ದರು. ಅಂತಹ ಕೆಲಸಗಳು ಆಗದಿದ್ದರೆ ಕನ್ನಡಕ್ಕೆ ಆಗುವ ಅಪಾಯಗಳ ಕುರಿತು ಸಹ ಅವರು ಎಚ್ಚರಿಸಿದ್ದರು. ಈ ಕೆಲಸಗಳು ಆಗುವಲ್ಲಿ ಸರ್ಕಾರಕ್ಕೆ ಒತ್ತಡ ಹಾಕುವ ಕೆಲಸವನ್ನು ಮುಂದುವರೆಸುವಂತೆ ಕಂಬಾರರಿಗೆ ತೇಜಸ್ವಿ ಸಲಹೆಯನ್ನೂ ನೀಡಿದ್ದರು. ಅದರಂತೆ ಕಂಬಾರರು ಇಂದಿಗೂ ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳಿಗೆ ಹಲವು ರೀತಿಯಲ್ಲಿ ಒತ್ತಡಗಳನ್ನು ಹಾಕುತ್ತಾ ತೇಜಸ್ವಿಯವರ ಆಶಯಗಳನ್ನು ಸಾಕಾರಗೊಳಿಸಲು ಶ್ರಮಿಸುತ್ತಿದ್ದಾರೆ. ಡಾ.ಚಂದ್ರಶೇಖರ ಕಂಬಾರರೂ ಸೇರಿದಂತೆ ಹಲವು ತಜ್ಞರನ್ನು ಸದಸ್ಯರನ್ನಾಗಿಸಿ ಡಾ.ಕೆ.ಚಿದಾನಂದಗೌಡರ ಅಧ್ಯಕ್ಷತೆಯಲ್ಲಿ ರಚಿಸಲಾದ ‘ ಕನ್ನಡ ತಂತ್ರಾಂಶ ಸಲಹಾ ಸಮಿತಿ ” ಯು ಶ್ರಮವಹಿಸಿ ಕಾರ್ಯನಿರ್ವಹಿಸಿ ೨೦೧೦ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ತುರ್ತಾಗಿ ಆಗಬೇಕಾದ ೧೦ ಕೆಲಸಗಳು ಮತ್ತು ಕನ್ನಡ ಅಭಿವೃದ್ಧಿಗಾಗಿ ೧೦ ಸಲಹೆಗಳನ್ನು ವರದಿಯು ಒಳಗೊಂಡಿತ್ತು. ವರದಿ ಸಲ್ಲಿಸಿ ವರ್ಷಗಳೇ ಕಳೆದರೂ ಶಿಫಾರಸ್ಸುಗಳು ಸರ್ಕಾರದ ಮಟ್ಟದಲ್ಲಿ ಅನುಷ್ಠಾನಗೊಳ್ಳುವ ಲಕ್ಷಣಗಳು ಕಾಣಲಿಲ್ಲ. ಸಮಿತಿ ಅಧ್ಯಕ್ಷರಾಗ...