ವಿಷಯಕ್ಕೆ ಹೋಗಿ

5. ಸ್ಮಾರ್ಟ್‌ಫೋನುಗಳಲ್ಲಿ ಕನ್ನಡದ ಫಾಂಟ್, ಪೂಣಾಕ್ಷರ ರೆಂಡರಿಂಗ್ ಇಲ್ಲದ ಅವ್ಯವಸ್ಥೆ










       ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಮಸ್ಕಾರ, ಚೆನ್ನಾಗಿದ್ದೀರಾ?, ಸ್ವಾತಂತ್ರ್ಯೋತ್ಸವದ ಶುಭಾಶಯಗಳುಎಂದು ಕನ್ನಡದಲ್ಲಿ ಸಂದೇಶವೊಂದನ್ನು ಉತ್ಸಾಹದಿಂದ ಬರೆದು ನಿಮ್ಮ ಸ್ನೇಹಿತರಿಗೆ ಗ್ರೂಪ್-ಮೆಸೇಜ್ ಆಗಿ ಕಳುಹಿಸುತ್ತೀರಿ ಎಂದಿಟ್ಟುಕೊಳ್ಳಿ.  ಗ್ರೂಪಿನಲ್ಲಿರುವವರೊಬ್ಬರು ಫೋನ್ ಮಾಡಿ ಅದೇನು ಕಳುಹಿಸಿದ್ದೀಯೋ ಮಾರಾಯ, ಮೆಸೇಜು ತುಂಬಾ ಚಿಕ್ಕಚಿಕ್ಕ ಡಬ್ಬಿಯಾಕಾರದ ಸಾಲುಗಳೇ ಇವೆಯಲ್ಲೋಎಂದು ಹೇಳಬಹುದು. ತಮ್ಮ ಫೋನ್‌ನಲ್ಲಿ ನಮಸ್‌ಕಾರ, ಚೆನ್‌ನಾಗಿದ್‌ದೀರಾ?, ಸ್‌ವಾತಂತ್‌ರ್‌ಯೋತ್‌ಸವದ ಶುಭಾಶಯಗಳುಎಂಬ ಸಂದೇಶ ನೋಡಿದ ಮತ್ತೊಬ್ಬರು ನಿಮಗೆ ಫೋನ್ ಮಾಡಿ ಇದೆಂಥಾ ಕನ್ನಡವೋ? ಒತ್ತಕ್ಷರಗಳೇ ಇಲ್ಲದ ಮೆಸೇಜು ಕಾಣುತ್ತಿದೆಎಂದು ಹೇಳಬಹುದು. ಈ ಸಮಸ್ಯೆಗಳಿಗೆಲ್ಲಾ ನಿಮ್ಮ ಸ್ನೇಹಿತರ ಫೋನ್‌ಗಳಲ್ಲಿ ಕನ್ನಡದ ಬೆಂಬಲಸರಿಯಾಗಿಲ್ಲ ಎಂಬುದೇ ಕಾರಣ. ಕನ್ನಡ ಅಕ್ಷರಗಳನ್ನು ತೋರಿಸಲು ಮೊಬೈಲ್‌ನಲ್ಲಿ ಫಾಂಟು ಇಲ್ಲದಿದ್ದರೆ ಡಬ್ಬಿಗಳು ಮೂಡಿಬರುತ್ತವೆ. ಕನ್ನಡ ತೋರಿಸಲು ಫಾಂಟು ಇದ್ದು, ಕನ್ನಡದ ರೆಂಡರಿಂಗ್ ವ್ಯವಸ್ಥೆ ಇಲ್ಲದಿದ್ದರೆ, ಒತ್ತಕ್ಷರಗಳಿಲ್ಲದ ಸಂದೇಶ ಮೂಡುತ್ತದೆ.  ಇದಕ್ಕೇನು ಪರಿಹಾರ? ಬಳಕೆದಾರರಾದ ನಮ್ಮನಿಮ್ಮ ಕೈಯಲ್ಲಿ ಇವುಗಳಿಗೇನೂ ಪರಿಹಾರವಿಲ್ಲ.  ಕಂಪ್ಯೂಟರಿನಲ್ಲಿ ಮಾಡಿದಂತೆ ಫಾಂಟನ್ನು ನಮ್ಮ ಮೊಬೈಲ್‌ಗೆ ನಾವೇ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ತಿಳಿದವರು, ತಂತ್ರಜ್ಞರು ಮಾಡಿಕೊಡಬೇಕೆಂದರೆ, ಮೊಬೈಲ್‌ಸೆಟ್‌ನೊಳಗಿನ ಕಾರ್ಯಾಚರಣೆ ವ್ಯವಸ್ಥೆಗೆ (ಓ.ಎಸ್.) ಬೀಗಹಾಕಲಾಗಿರುತ್ತದೆ. ತಯಾರಕರ ಹೊರತಾಗಿ ಆ ಬೀಗದ ಕೀಲಿಕೈ ಯಾರಲ್ಲಿಯೂ ಇರುವುದಿಲ್ಲ. ಕಷ್ಟಪಟ್ಟು ಆ ಬೀಗವನ್ನು ಒಡೆದು ಒಳಗೆ ಹೋಗಿ ಫಾಂಟು ಅಳವಡಿಸಿದರೆ ಕೇವಲ ಅಕ್ಷರ ತೋರಿಕೆ’ (ಡಿಸ್‌ಪ್ಲೇ) ಮಾತ್ರವೇ ಬರುತ್ತದೆಯೇ ಹೊರತು. ಒತ್ತಕ್ಷರಗಳ ಸಹಿತ ಕನ್ನಡವನ್ನು ಸರಿಯಾಗಿ ಟೈಪ್‌ಮಾಡಿ ಮೂಡಿಸಲು ಸಾಧ್ಯವಾಗುವುದಿಲ್ಲ. ಪೂರ್ಣಾಕ್ಷರಗಳ ರೆಂಡರಿಂಗ್ ವ್ಯವಸ್ಥೆಯನ್ನು ತಯಾರಕರು ಈ ಮೊದಲೇ ಸೆಟ್‌ನಲ್ಲಿ ಅಳವಡಿಸಿರದ ಹೊರತು, ‘ರೂಟಿಂಗ್ಎಂದು ಕರೆಯಲಾಗುವ ಕಳ್ಳಮಾರ್ಗಗಳ ಮೂಲಕ ತಜ್ಞರಿಂದ ಫಾಂಟು ಹಾಕಿಸಿಕೊಂಡರೂ ಅದು ಉಪಯೋಗಕ್ಕೆ ಬರುವುದಿಲ್ಲ. ಕನ್ನಡದ ಪದಗಳು ಒತ್ತಕ್ಷರಗಳ ಸಹಿತ ಸರಿಯಾಗಿ ಮೂಡಬೇಕೆಂದರೆ, ನಿಮ್ಮ ಸೆಟ್‌ಗಳಲ್ಲಿ  ಕ್ಯಾರೆಕ್ಟರ್ ರೆಂಡರಿಗ್ ವ್ಯವಸ್ಥೆಅಳವಡಿಸುವ ಹೊಣೆಗಾರಿಕೆ ಮೊಬೈಲ್ ಸೆಟ್ ತಯಾರಕರದ್ದು.  ಖರೀದಿಯಾಗಿ ಬಳಕೆಯಲ್ಲಿರುವ ಸೆಟ್‌ಗಳತ್ತ ತಯಾರಕರು ಕಣ್ಣೆತ್ತಿಯೂ ನೋಡುವುದಿಲ್ಲ. ನಿಮ್ಮ ಈಗಿರುವ ಸ್ಮಾರ್ಟ್‌ಫೋನಿನಲ್ಲಿ ಕನ್ನಡದ ಸಮಸ್ಯೆಗಳಿವೆ ಎಂದಾದರೆ, ನಿಮ್ಮ ಹಳೆಯ ಸೆಟ್‌ಗಳನ್ನು ಮೂಲೆಗೆ ಹಾಕಿ ಆಧುನಿಕವಾದ ಹೊಸ ಸೆಟ್‌ಗಳನ್ನು ಖರೀದಿಸುವುದೇ ಇದಕ್ಕಿರುವ ಪರಿಹಾರ.

       ಮೊಬೈಲ್ ಪೋನು ರಿಂಗಣಿಸಿದಾಗ ಹಲೋ..ಎಂದು ಹೇಳಿ ಮಾತಾಡಿ.. ಮಾತು ಮುಗಿಸಿ ಕಿಸೆಗಿಟ್ಟು ಮುಂದಿನ ಕೆಲಸ ನೋಡುವ ಕಾಲ ಎಂದಿಗೋ ಮುಗಿದುಹೋಗಿದೆ.  ಸ್ಮಾರ್ಟ್‌ಫೋನ್ ಎಂಬುದು ಓದಲು, ನೋಡಲುಅನುಕೂಲಗಳಿರುವ ಉಪಕರಣವಾದ ಮೇಲಂತೂ ವಾಟ್ಸಾಪ್, ಫೇಸ್ಬುಕ್, ಟ್ವಿಟ್ಟರ್ ಇತ್ಯಾದಿಗಳಲ್ಲಿ ಮೆಸೇಜುಗಳನ್ನು ಓದಲು, ವಿಡಿಯೋಗಳನ್ನು ನೋಡಲುಸ್ಮಾರ್ಟ್‌ಫೋನುಗಳು ಎಲ್ಲರ ಅಂಗೈಯಲ್ಲಿರುವ ಚಿಕ್ಕ ಕಂಪ್ಯೂಟರ್‌ಗಳೇ ಆಗಿಹೋಗಿವೆ.  ಹೀಗಾಗಿ, ಕಂಪ್ಯೂಟರ್‌ಗಳಲ್ಲಿದ್ದಂತೆ ಈಗ ಸ್ಮಾರ್ಟ್‌ಫೋನುಗಳಲ್ಲಿಯೂ ಭಾಷೆಯ ಪ್ರಮೇಯ ಹೆಚ್ಚಾಗಿದೆ. ಈಗೇನೋ ಆಂಡ್ರಾಯ್ಡ್ ಸ್ಮಾರ್ಟ್‌ಫೋನುಗಳ ಟಚ್‌ಸ್ಕ್ರೀನ್ ಮೇಲೆ ಕೈಯಲ್ಲಿ ಬರೆದು ಕನ್ನಡವನ್ನು ಮೂಡಿಸುವ ಹ್ಯಾಂಡ್‌ರೈಟಿಂಗ್ ಇನ್‌ಪುಟ್ಬಂದಿದೆ. ಆದರೆ, ಫೋನ್ ತಯಾರಕರು ಕನ್ನಡವನ್ನು ಅಳವಡಿಸಿಕೊಡದಿದ್ದ ಕಾಲದಲ್ಲಿ ಕನ್ನಡ ತಂತ್ರಜ್ಞರು ದ್ರಾವಿಡಪ್ರಾಣಾಯಾಮ ಮಾಡಿ ಕನ್ನಡದ ಫಾಂಟ್‌ನ್ನು  ಫೋನ್ ಒಳಗೆ ಅಳವಡಿಸಿದ್ದ ಕಸರತ್ತು ಈಗ ಇತಿಹಾಸ. ಕನ್ನಡದ ಉತ್ಸಾಹೀ ಕನ್ನಡ ತಂತ್ರಜ್ಞರು ಕಳ್ಳಮಾರ್ಗದಲ್ಲಿ ಹೋಗಿ ಫೋನ್‌ನ ಕಾರ್ಯಾಚರಣೆ ವ್ಯವಸ್ಥೆಯ (ಓ.ಎಸ್.ನ) ಬೀಗವನ್ನು ಒಡೆದು ಒಳನುಗ್ಗಿ ಅಕ್ಷರಗಳನ್ನು ಅಳವಡಿಸುವ ಕೆಲಸವನ್ನೂ ಮಾಡಿದ್ದಾರೆ. ಇದಕ್ಕೆ ಮೊಬೈಲನ್ನು ರೂಟಿಂಗ್ ಮಾಡುವುದುಎಂದು ಕರೆಯಲಾಗುತ್ತದೆ.  ಕನ್ನಡ ಭಾಷಿಕ ಫೋನ್ ಬಳಕೆದಾರರ ಮಾರುಕಟ್ಟೆಯನ್ನು ನಗದೀಕರಿಸಿಕೊಳ್ಳಲಾದರೂ, ಕನ್ನಡದ ಅಳವಡಿಸುವ ಶಾಸ್ತ್ರವನ್ನು ಮಾಡಿದ್ದ ಕೆಲವು ಸೆಲ್‌ಫೋನ್ ತಯಾರಕರು, ಸಂಪೂರ್ಣವಾಗಿ ಕನ್ನಡದ ಬೆಂಬಲವನ್ನು ನೀಡಿರಲಿಲ್ಲ. ಬಹುರಾಷ್ಟ್ರೀಯ ಕಂಪನಿಯಾದ ಗೂಗಲ್, ಭಾರತೀಯ ಭಾಷೆಗಳನ್ನು ಅಳವಡಿಸುವ ಮೂಲಕ ತನ್ನ ಮಾರುಕಟ್ಟೆಯನ್ನು ಉತ್ತಮಪಡಿಸಿಕೊಳ್ಳಬಹುದು ಎಂದು ಮೊದಲಿಗೆ ಅರಿತುಕೊಂಡು ಕಾರ್ಯೋನ್ಮುಖವಾಯಿತು. ಭಾರತೀಯ ಭಾಷೆಗಳಿಗೆ ಮೊದಲಿಗೆ ಗೂಗಲ್ ಇಂಡಿಕ್ ಕೀಬೋರ್ಡ್ಎಂಬ ಟೈಪಿಂಗ್ ಆಪ್ ಬಿಡುಗಡೆ ಮಾಡಿತು. ನಂತರ, ಎರಡು ವರ್ಷಗಳ ಹಿಂದೆ ಹ್ಯಾಂಡ್‌ರೈಟಿಂಗ್ ಇನ್‌ಪುಟ್ಎಂಬ ಹೆಸರಿನ ಕೈಬರಹದ ಆಪ್ ಬಿಡುಗಡೆ ಮಾಡಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...