ವಿಷಯಕ್ಕೆ ಹೋಗಿ

24. ಕಂಪ್ಯೂಟರ್‌ಗಳಲ್ಲಿ ಕನ್ನಡ ಬಳಸಲು ಈಗ ಸಮಸ್ಯೆಗಳಿಲ್ಲ.


ಸಹಜ ಭಾಷೆಗಳ ಲಿಪಿಯನ್ನು ಕಂಪ್ಯೂಟರ್ ಮೊದಲಿಗೆ ಸೃಜಿಸುವಂತೆ, ನಂತರ ದಾಖಲಿಸುವಂತೆ, ದಾಖಲಿಸಿದ ಲಿಪಿಯನ್ನು ಮತ್ತೆ ಗುರುತಿಸುವಂತೆ ಒಂದು ಸದೃಢವಾದ, ಖಚಿತವಾಗಿ ಕಾರ್ಯನಿರ್ವಹಿಸುವ ಕಂಪ್ಯೂಟರ್ ವ್ಯವಸ್ಥೆಯನ್ನು ನಿರ್ಮಿಸುವುದೇ ಭಾಷಾ ಲಿಪಿತಂತ್ರಜ್ಞಾನದ ಪ್ರಮುಖ ಕಾರ್ಯವಾಗಿದೆ. ಭಾಷಾಲಿಪಿಗಳನ್ನು ಮೊದಲಿಗೆ ಕಂಪ್ಯೂಟರ್‌ನಲ್ಲಿ ಅಳವಡಿಸುವುದಕ್ಕೆ  ಲಾಂಗ್ವೇಜ್ ಸ್ಕ್ರಿಪ್ಟ್ ಎನೇಬಲಿಂಗ್ಎನ್ನಲಾಗಿದೆ.  ಸಹಜಭಾಷೆಯ ಚಾಕ್ಷುಕ ರೂಪವಾದ ಲಿಪಿಗಳನ್ನು ಕಂಪ್ಯೂಟರ್ ಗುರುತಿಸುವಂತೆ ರೂಪಿಸುವ ವ್ಯವಸ್ಥೆಯು ಬಹಳ ಸಂಕೀರ್ಣವಾದುದು ಹಾಗೂ ಹಲವು ತಂತ್ರಜ್ಞಾನಗಳ ಸಮಗ್ರೀಕರಣವಾಗಿದೆ.  ಇಂತಹ ತಂತ್ರಜ್ಞಾನಗಳನ್ನು ಬಳಸಿಯೇ ಭಾರತೀಯ ತಂತ್ರಾಂಶ ತಯಾರಕರು ತಾಂತ್ರಿಕವಾಗಿ ಕ್ಲಿಷ್ಟಕರವಾಗಿರುವ ದೇಸೀ ಭಾಷಾಲಿಪಿಗಳಿಗೆ ಡಿಜಿಟಲ್ ಕಿರೀಟವನ್ನು ತೊಡಿಸುವಲ್ಲಿ ಯಶಸ್ವಿಯಾದರು.  ಭಾರತೀಯ ಭಾಷಾಲಿಪಿಗಳ ಸೌಂದರ್ಯ ಹೆಚ್ಚಿಸುವ ವೈವಿಧ್ಯಮಯ ಫಾಂಟ್‌ಗಳನ್ನೂ ಸಹ ಸಿದ್ಧಪಡಿಸಿದರು. ಪಠ್ಯವನ್ನು ಊಡಿಸಲು ಬಹುರೀತಿಯ ಕೀಲಿಮಣೆ ವಿನ್ಯಾಸಗಳನ್ನೂ ನೀಡಿದರು. ಆದಾಗ್ಯೂ, ಬಳಕೆದಾರರಿಗೆ ಕಂಪ್ಯೂಟರ್ ಭಾಷಾ ಬಳಕೆಯಲ್ಲಿ ಹಲವು ಸಮಸ್ಯೆಗಳು ಇದ್ದವು.

ಅಂತಾರಾಷ್ಟ್ರೀಯ ಮಟ್ಟದ ತಂತ್ರಾಂಶ ತಯಾರಕರು, ಈ ಹಿಂದೆ, ತಮ್ಮ ತಂತ್ರಾಂಶಗಳಲ್ಲಿ ಭಾರತೀಯ ಭಾಷಾ ಲಿಪಿಗಳ ಬಳಕೆಗಾಗಿ ಸೌಲಭ್ಯಗಳನ್ನು ನೀಡಿರಲಿಲ್ಲ. ಆಗ, ಭಾರತೀಯ ಭಾಷೆಗಳ ಪಠ್ಯವನ್ನು ಗಣಕೀಕರಿಸಲು ರಾಷ್ಟ್ರೀಯ ತಂತ್ರಾಂಶ ತಯಾರಕರು ಲಿಪಿತಂತ್ರಾಂಶಗಳನ್ನು ಸಿದ್ಧಪಡಿಸಿದರು. ಕಂಪ್ಯೂಟರ್‌ನಲ್ಲಿ ಪಠ್ಯವನ್ನು ಕೀಲಿಮಣೆ ಬಳಸಿ ಊಡಿಸುವುದು; ಊಡಿಸಿದ ಪಠ್ಯವು ಸರಿಯಾಗಿ ಮಾನಿಟರ್ ಪರದೆಯಲ್ಲಿ ಮೂಡಿದೆಯೇ ಎಂದು ನೋಡುವುದು; ಮೂಡಿರುವ ಪಠ್ಯವನ್ನು ಪ್ರಿಂಟರ್ ಬಳಸಿ ಹಾಳೆಯ ಮೇಲೆ ಮುದ್ರಿಸಿಕೊಳ್ಳುವುದು; ಮುದ್ರಿಸಿದ ಪಠ್ಯವನ್ನು ಮುಂದೆ ಭವಿಷ್ಯದಲ್ಲಿ ಬಳಸಲು, ಅದನ್ನು ಹಾರ್ಡ್‌ಡಿಸ್ಕ್‌ನಲ್ಲಿ ಉಳಿಸುವುದು - ಇವೆಲ್ಲವೂ ಕಂಪ್ಯೂಟರ್ ಬಳಕೆದಾರರ ಕೆಲಸ. ಇವುಗಳನ್ನು ತಂತ್ರಜ್ಞಾನದ ಪರಿಭಾಷೆಯಲ್ಲಿ ಪಠ್ಯದ ಇನ್‌ಪುಟ್’, ’ಪಠ್ಯದ ಸ್ಟೋರೆಜ್’, ’ಪಠ್ಯದ ಡಿಸ್‌ಪ್ಲೇಮತ್ತು ಪಠ್ಯದ ಪ್ರಿಂಟಿಂಗ್’ - ಎನ್ನಲಾಗಿದೆ. ಕಂಪ್ಯೂಟರ್ ತಂತ್ರಜ್ಞಾನ ಬಳಸಿ ಭಾಷೆಯ ಅಕ್ಷರಗಳನ್ನು ಸೂಕ್ತ ರೀತಿಯಲ್ಲಿ ಕಂಪ್ಯೂಟರ್‌ನಲ್ಲಿ ಪ್ರತಿನಿಧಿಸುವ ಮೂಲಕ ಭಾಷಾ ಪಠ್ಯವನ್ನು ಮೂಡಿಸುವುದು, ಸಂಗ್ರಹಿಸುವುದು ಮತ್ತು ಪ್ರದರ್ಶಿಸುವುದು ಹಾಗೂ ಮುದ್ರಿಸುವುದು - ಇವೆಲ್ಲವುಗಳ ಏಕೀಕೃತ ವ್ಯವಸ್ಥೆಯನ್ನು ಭಾಷಾ ಲಿಪಿವ್ಯವಸ್ಥೆಎನ್ನಲಾಗಿದೆ. ಇಂತಹ ಲಿಪಿವ್ಯವಸ್ಥೆಯನ್ನು ರೂಪಿಸುವುದು ತಂತ್ರಾಂಶ ತಯಾರಕರ ಹೊಣೆಗಾರಿಕೆಯಾಗಿದೆ.

       ಕನ್ನಡ ಭಾಷೆಯನ್ನು ಕಂಪ್ಯೂಟರ್‌ನ ಹೊಸ ಹೊಸ ತಂತ್ರಜ್ಞಾನಗಳ ಪರಿಧಿಯೊಳಗೆ ತರುವ ಮೂಲಕ, ಇಂದು, ಕಂಪ್ಯೂಟರ್‌ನಲ್ಲಿ ಕನ್ನಡ ಲಿಪಿಯನ್ನು ಇಂಗ್ಲಿಷ್‌ನಷ್ಟೇ ಸಮರ್ಥವಾಗಿ ಬಳಸಲು ಸಾಧ್ಯವಾಗಿದೆ. ತಂತ್ರಜ್ಞಾನ ಬೆಳೆದಂತೆಲ್ಲಾ ಕನ್ನಡದ ಲಿಪಿವ್ಯವಸ್ಥೆಗಳೂ ಸಹ ಆವಿಷ್ಕಾರಗೊಂಡು, ಕಾಲಕಾಲಕ್ಕೆ ಪರಿಷ್ಕರಣೆಗೊಂಡು ಬೆಳವಣಿಗೆ ಕಂಡಿವೆ.  ಕನ್ನಡ ಭಾಷೆಯನ್ನು ತಂತ್ರಜ್ಞಾನಕ್ಕೆ ತಕ್ಕಂತೆ ಬಗ್ಗಿಸುವ ಕೆಲಸಕ್ಕೆ ಕೈಹಾಕದೆ, ತಂತ್ರಜ್ಞಾನವನ್ನೇ ಕನ್ನಡ ಭಾಷೆಗೆ ಒಗ್ಗಿಸುವ ಕೆಲಸವನ್ನು ಸಮರ್ಥವಾಗಿ ಮಾಡಲಾಗಿದೆ. ಕನ್ನಡ ಭಾಷೆಯ ಪಠ್ಯವನ್ನು - ಕೀಲಿಮಣೆ ಬಳಸಿ ಊಡಿಕೆ (ಇನ್‌ಪುಟ್) ಮಾಡಲು ಹಾರ್ಡ್‌ಡಿಸ್ಕ್‌ನಲ್ಲಿ ಸಂಗ್ರಹ (ಸ್ಟೊರೇಜ್) ಮಾಡಲು ಹಾಗೂ ತೆರೆಯ ಮೇಲೆ ಪ್ರದರ್ಶನ (ಡಿಸ್‌ಪ್ಲೇ) ಮಾಡಲು - ಸಾಧ್ಯವಾಗಿಸುವ ವ್ಯವಸ್ಥೆಯನ್ನು ಒಟ್ಟಾರೆಯಾಗಿ ಕನ್ನಡ ಲಿಪಿವ್ಯವಸ್ಥೆಎನ್ನಲಾಗಿದೆ.

       ಕನ್ನಡ ಲಿಪಿವ್ಯವಸ್ಥೆಯ ಮೂಲ ಅಂಶಗಳಲ್ಲಿ ಒಂದಾದ, ’ಪಠ್ಯದ ಇನ್‌ಪುಟ್ಗಾಗಿ ಟೈಪ್‌ರೈಟರ್ ವಿನ್ಯಾಸವೂ ಸೇರಿದಂತೆ, ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಕಾಲಕಾಲಕ್ಕೆ ವಿವಿಧ ರೀತಿಯ ಕೀಲಿಮಣೆ ವಿನ್ಯಾಸಗಳು ಬಳಕೆಗೆ ಬಂದವು. ಅವುಗಳಲ್ಲಿ ಇನ್‌ಸ್ಕ್ರಿಪ್ಟ್, ಫೋನೋಟಿಕ್, ಟ್ರಾನ್ಸ್‌ಲಿಟರೇಷನ್ ಇತ್ಯಾದಿ ವಿನ್ಯಾಸಗಳು ಪ್ರಮುಖವಾದವು. ನಂತರದಲ್ಲಿ, ಶಿಷ್ಟತೆಗಾಗಿ (ಸ್ಟ್ಯಾಂಡರ್ಡ್) ಕರ್ನಾಟಕ ಸರ್ಕಾರದಿಂದ ಏಕರೂಪ ಕೀಲಿಮಣೆ ವಿನ್ಯಾಸವು (ಕೆ.ಪಿ.ರಾವ್ ವಿನ್ಯಾಸ) ನಿಗದಿಯಾಯಿತು.

       ಲಿಪಿವ್ಯವಸ್ಥೆಯ ಎರಡನೆಯ ಅಂಶವಾದ, ’ಪಠ್ಯದ ಸ್ಟೊರೇಜ್ಗಾಗಿ,  ಮೊದಲಿಗೆ, ಇಂಗ್ಲಿಷ್‌ನ ಮಾದರಿಯಲ್ಲಿಯೇ ಅನುಕರಣಾ ತಂತ್ರಗಳು ಬಳಕೆಗೊಂಡವು. ಇಂಗ್ಲಿಷ್ ಹೊರತಾದ ವಿದೇಶೀ ಭಾಷೆಗಳ ಅಕ್ಷರಸ್ಥಾನಗಳಲ್ಲಿ ಕನ್ನಡ ಅಕ್ಷರಭಾಗಗಳನ್ನು ಸಮೀಕರಿಸಿ ಇರಿಸುವ ತಂತ್ರವನ್ನು ಬಳಸಲಾಯಿತು. ನಂತರದಲ್ಲಿ, ಕನ್ನಡಕ್ಕೆ ಪ್ರತ್ಯೇಕ ಸ್ಟೋರೇಜ್ ಕೋಡ್ಬಳಸುವ ಮೂಲಕ ಕನ್ನಡ ಲಿಪಿಯ ಅಸಂದಿಗ್ಧ ಬಳಕೆಗಾಗಿ ಈಗ ಯೂನಿಕೋಡ್ (Unicode) ಎಂಬ ಹೆಸರಿನ ಅಂತಾರಾಷ್ಟ್ರೀಯ ಮಾನಕ ಅಥವಾ ಶಿಷ್ಟತೆ ಜಾರಿಗೊಂಡಿದೆ. ಜಾಗತಿಕ ಮಟ್ಟದಲ್ಲಿ ಕನ್ನಡಕ್ಕೆ ಕಂಪ್ಯೂಟರಿನಲ್ಲಿ ಸ್ಥಾನಮಾನಗಳು ದೊರೆತಿರುವುದರಿಂದ ಈಗ ಪಠ್ಯದ ಎನ್‌ಕೋಡಿಂಗ್ಸಮಸ್ಯೆಗಳು ಪರಿಹಾರಗೊಂಡಿವೆ. 

       ಲಿಪಿವ್ಯವಸ್ಥೆಯ ಮೂರನೆಯ ಅಂಶವಾದ ಪಠ್ಯದ ಡಿಸ್‌ಪ್ಲೇಗಾಗಿ, ವಿವಿಧ ರೀತಿಯ ಅಕ್ಷರರೂಪ, ವಿನ್ಯಾಸಗಳನ್ನು ಹೊಂದಿರುವ ನೂರಾರು ಫ಼ಾಂಟ್‌ಗಳು ತಯಾರಾಗಿ ಬಳಕೆಯಲ್ಲಿವೆ. ಅಲ್ಲದೆ, ಆಸ್ಕಿ (American Standard Code for Information Interchange- ASCII) ಆಧಾರಿತ ಪಠ್ಯ ರೂಪದ ಮಾಹಿತಿಗಳ ವಿನಿಮಯಕ್ಕಾಗಿ, ಫ಼ಾಂಟ್‌ನ ಏಕರೂಪ ಅಕ್ಷರಭಾಗಗಳ ಸಂಕೇತಗಳ (ಗ್ಲಿಫ಼್ ಕೋಡ್)ಸ್ಟ್ಯಾಂಡರ್ಡ್ ಸಹ ನಿಗದಿಯಾಗಿದೆ.  ಉದಾಹರಣೆಗೆ ಅಕ್ಷರವನ್ನು ಪ್ರತಿನಿಧಿಸಲು ಎಲ್ಲ ತಂತ್ರಾಂಶ ತಯಾರಕರೂ ಸಹ ನಿಗಿದಿಯಾದ ಒಂದೇ ಸಂಕೇತವನ್ನು ಬಳಸಬೇಕು. ಇಂತಹ ಏಕರೂಪದ ಕೋಡ್‌ಗಳನ್ನು ಬಳಸುವುದರಿಂದ ಹಳೆಯ ಬೇರೆ ಬೇರೆ ಫಾಂಟ್‌ಗಳಲ್ಲಿರುವ ಪಠ್ಯವನ್ನು ಪರಸ್ಪರ ಬದಲಾಯಿಸಿಕೊಳ್ಳಲು ಅನುಕೂಲವಾಗುತ್ತದೆ. ಹಿಂದೆ, ಅಕ್ಷರಭಾಗಗಳ ಸಂಕೇತ ಸಂಖ್ಯೆಗಳು ಒಂದೊಂದು ಫಾಂಟಿನಲ್ಲಿ ಒಂದೊಂದು ರೀತಿ ಇದ್ದ ಕಾರಣ, ಬೇರೆ ಬೇರೆ  ಫಾಂಟ್ ಬಳಸಿ ಟೈಪ್ ಮಾಡಿದ ಪಠ್ಯಗಳನ್ನು ಮತ್ತೊಂದು ಫಾಂಟ್ ಬಳಸಿ ತೆರೆದು ಉಪಯೋಗಿಸಲು ಸಾಧ್ಯವಿರಲಿಲ್ಲ.

       ಕನ್ನಡ ಲಿಪಿಯನ್ನು ಕಂಪ್ಯೂಟರ್‌ಗಳಲ್ಲಿ ಇಂಗ್ಲಿಷ್‌ನಷ್ಟೇ ಸಮರ್ಥವಾಗಿ ಬಳಸುವಲ್ಲಿ ಇರುವ ತಾಂತ್ರಿಕ ತೊಡಕುಗಳನ್ನು ನಿವಾರಿಸಿಕೊಳ್ಳಲು, ಇಂದಿನ ಕನ್ನಡ ಲಿಪಿವ್ಯವಸ್ಥೆಗಳಲ್ಲಿ, ಇಂಗ್ಲಿಷ್‌ನೊಂದಿಗೆ  ಕನ್ನಡದ ಲಿಪಿಯನ್ನೂ ಏಕಕಾಲಕ್ಕೆ ಬಳಸಬಹುದಾದ ದ್ವಿ-ಭಾಷಾ ಫ಼ಾಂಟ್‌ಗಳು ಬಳಕೆಗೆ ಬಂದು ಈಗ ಹಿನ್ನೆಲೆಗೆ ಸರಿದುಹೋಗಿವೆ. ಹಳತಾಗಿರುವ, ಬೇರೆ ಬೇರೆ ತಂತ್ರಾಂಶಗಳ ಮೂಲಕ ಸಿದ್ಧವಾದ ಕನ್ನಡದ ಪಠ್ಯವನ್ನು ಪರಸ್ಪರ ತಂತ್ರಾಂಶಗಳಲ್ಲಿ ವಿನಿಮಯಮಾಡಿಕೊಳ್ಳಲು ಅನುವುಮಾಡಿಕೊಡುವ ಫಾಂಟ್ ಪರಿವರ್ತಕಗಳು (ಕನ್‌ವರ್ಟರ‍್ಸ್) ಇಂದು ಲಭ್ಯವಿವೆ.  ಮಾಹಿತಿ ವಿನಿಮಯಕ್ಕಾಗಿ ಪರಿವರ್ತಕಗಳ ಬಳಸು ಮಾರ್ಗವನ್ನು ತಪ್ಪಿಸಲು ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ಫ಼ಾಂಟ್ ಶಿಷ್ಟತೆಗಳು (Indian  Standard Code for Information Interchange- ISCII) ಜಾರಿಯಾಗಿವೆ. ಈಗ ಯೂನಿಕೋಡ್ ಹೆಸರಿನ ಅಂತಾರಾಷ್ಟ್ರೀಯ ಶಿಷ್ಟತೆಯ ಅನುಸಾರ ಕನ್ನಡದ ಲಿಪಿವ್ಯವಸ್ಥೆಯು ಆಪರೇಟಿಂಗ್ ಸಿಸ್ಟಂನಲ್ಲಿಯೇ (ಓ.ಎಸ್) ಅಳವಡಿಕೆಯಾಗಿದೆ. ಓ.ಎಸ್.ಗಳ ಮೇಲೆ ನುಡಿ, ಬರಹ ತರಹದ ಕನ್ನಡದ ಲಿಪಿತಂತ್ರಾಂಶಗಳನ್ನು ಪ್ರತ್ಯೇಕವಾಗಿ ಅಳವಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಮೈಕ್ರೋಸಾಫ್ಟ್ ಕಾರ್ಪೊರೇಷನ್ ಮತ್ತಿತರ ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ಕನ್ನಡ ಲಿಪಿವ್ಯವಸ್ಥೆಯನ್ನು, ಜಾಗತಿಕ ಶಿಷ್ಟತೆಯೊಡನೆ, ತಮ್ಮ ಓ.ಎಸ್.ಗಳಲ್ಲಿ ಅಳವಡಿಸಿದ್ದಾರೆ. ಮುಕ್ತ ಮತ್ತು ಉಚಿತ ತಂತ್ರಾಂಶ ಚಳವಳಿಯ ಕಾರ್ಯಕರ್ತರು ಎಲ್ಲ ರೀತಿಯ ತಂತ್ರಾಂಶಗಳಲ್ಲಿ ಕನ್ನಡಕ್ಕೂ ಸಮರ್ಥವಾದ ಬೆಂಬಲವನ್ನು ನೀಡಿದ್ದಾರೆ.

       ಎಲ್ಲಾ ಆಧುನಿಕ ಕಂಪ್ಯೂಟರ್ ಓ.ಎಸ್.ಗಳಲ್ಲಿ ಮತ್ತು ಅವುಗಳ ಮೇಲೆ ಕಾರ್ಯನಿರ್ವಹಿಸುವ ಆನ್ವಯಿಕ ತಂತ್ರಾಂಶಗಳಲ್ಲಿ (ಅಪ್ಲಿಕೇಷನ್ಸ್) ಕನ್ನಡವನ್ನು ಬಳಸುವಲ್ಲಿ ಈ ಹಿಂದೆ ಇದ್ದ ತಾಂತ್ರಿಕ ತೊಡಕುಗಳು ಈಗ ಇಲ್ಲವಾಗಿವೆ. ಶಿಷ್ಟತೆಗಳು ಇಲ್ಲದಿದ್ದಾಗ, ಬೇರೆಬೇರೆ ತಂತ್ರಾಂಶ ತಯಾರಕರು ತಮಗೆ ತೋಚಿದಂತೆ ತಂತ್ರಾಂಶಗಳನ್ನು ಸಿದ್ಧಪಡಿಸಿದ್ದರು. ಇದರಿಂದ ಮಾಹಿತಿ ವಿನಿಮಯದಂತಹ ಅತಿದೊಡ್ಡ ಸಮಸ್ಯೆಯು ತಲೆದೋರಿತ್ತು. ಶಿಷ್ಟತೆಗಳು ನಿಗದಿಯಾದ ನಂತರದಲ್ಲಿ, ಎಲ್ಲ ಸಮಸ್ಯೆಗಳು ಪರಿಹಾರಗೊಂಡು ಇಂಗ್ಲಿಷ್‌ನಂತೆ ಕನ್ನಡ ಲಿಪಿವ್ಯವಸ್ಥೆಯೂ ಸಹ ಏಕರೂಪತೆಯನ್ನು ಪಡೆದಿದೆ.  ಕಂಪ್ಯೂಟರಿನಲ್ಲಿ ಈಗ ಕನ್ನಡ ಬಳಸಲು ಹೆಚ್ಚಿನ ಸಮಸ್ಯೆಗಳೇನೂ ಇಲ್ಲ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...