ವಿಷಯಕ್ಕೆ ಹೋಗಿ

21. ಕಂಪ್ಯೂಟರ್ ತಂತ್ರಾಂಶಗಳ ಪ್ರಾದೇಶೀಕರಣದ ಅಂಗವಾಗಿ ಭಾಷಾ ಹೊದಿಕೆಗಳನ್ನು ಹೊದ್ದ ತಂತ್ರಾಂಶಗಳು


ಕಂಪ್ಯೂಟರಿನಲ್ಲಿ ಕನ್ನಡ ಪಠ್ಯವನ್ನು ಟೈಪ್‌ಮಾಡಿದರೆ, ನಾವು ಕನ್ನಡವನ್ನು ಕಂಪ್ಯೂಟರಿನಲ್ಲಿ ಬಳಸುತ್ತಿದ್ದೇವೆ ಎನ್ನಬಹುದು. ಕಂಪ್ಯೂಟರ್ ನಮ್ಮೊಂದಿಗೆ ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಅನಿಸಿದರೆ, ಕಂಪ್ಯೂಟರಿನ ಸಂವಹನ ಭಾಷೆಯನ್ನಾಗಿ ಕನ್ನಡವನ್ನು ನಿಗದಿಪಡಿಸಿಕೊಳ್ಳಬೇಕು. ಅಂದರೆ, ಕನ್ನಡ ಆವೃತ್ತಿಯ ಓ.ಎಸ್.ಗಳು ಮತ್ತು ಅಪ್ಲಿಕೇಷನ್ ತಂತ್ರಾಂಶಗಳನ್ನು ಅನುಸ್ಥಾಪಿಸಿಕೊಳ್ಳಬೇಕು ಅಥವಾ ಇರುವ ವಿಂಡೋಸ್ ಓ.ಎಸ್. ಮತ್ತು ಮೈಕ್ರೋಸಾಫ್ಟ್ ಆಫೀಸ್ ತಂತ್ರಾಂಶಗಳಿಗೆ ಕನ್ನಡದ ಭಾಷಾ ಹೊದಿಕೆ’, ಅಂದರೆ, ಕನ್ನಡ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್‌ನ್ನು (ಎಲ್.ಐ.ಪಿ) ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಇಂತಹ ಎಲ್.ಐ.ಪಿ.ಗಳ ಅಳವಡಿಕೆಯಿಂದಾಗಿ ಕಂಪ್ಯೂಟರ್ ತನ್ನ ಬಳಕೆದಾರರೊಂದಿಗೆ ಕನ್ನಡದಲ್ಲಿಯೇ ಸಂವಹನವನ್ನು ನಡೆಸುತ್ತದೆ. ಇಂಗ್ಲಿಷ್‌ನ ಓಪನ್ಎಂಬುದು ತೆರೆ’, ಕ್ಲೋಸ್ ಎಂಬುದು ಮುಚ್ಚು’, ಎಕ್ಸಿಟ್ ಎಂಬುದು ನಿರ್ಗಮಿಸುಇತ್ಯಾದಿಗಳಾಗಿ ಬದಲಾಗುತ್ತವೆ. ಸಿದ್ಧಗೊಂಡ ಕಡತವನ್ನು ಉಳಿಸಬೇಕೆ?” ಎಂದು ಕಂಪ್ಯೂಟರ್ ಕೇಳಿದಾಗ ಹೌದುಅಥವಾ ಇಲ್ಲಎಂಬ ಕನ್ನಡದಲ್ಲಿರುವ ಬಟನ್‌ಗಳನ್ನು ಕ್ಲಿಕ್‌ಮಾಡುವ ಮೂಲಕ ನಾವು ಕಂಪ್ಯೂಟರಿಗೆ ಉತ್ತರಿಸಬಹುದು! ಕಂಪ್ಯೂಟರ್ ತಂತ್ರಾಂಶದ ಮೆನುಬಾರ್ಮತ್ತು ಮೆನುಐಟಂಗಳು ಸಂಪೂರ್ಣವಾಗಿ ಕನ್ನಡದಲ್ಲಿಯೇ ಇರುತ್ತವೆ. ಇಂತಹ ಪರಿಸರಕ್ಕೆ ಕಂಪ್ಯೂಟರ್ ಕಾರ್ಯಾಚರಣೆಯ ಕನ್ನಡೀಕರಣ ಎನ್ನುತ್ತೇವೆ. ಬಳಕೆದಾರರೊಂದಿಗೆ ಕನ್ನಡದಲ್ಲಿ ಮಾತನಾಡುವುದನ್ನು ಆಗುಮಾಡಿರುವುದೇ ಈ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್‌ಗಳು’. ಇನ್ನು ಅಪ್ಲಿಕೇಷನ್ ತಂತ್ರಾಂಶ ಸಿದ್ಧಪಡಿಸುವಾಗಲೇ ಸಂವಹನ ಭಾಷೆ ಕನ್ನಡವಾಗಿರುವಂತೆ ಸಿದ್ಧಪಡಿಸುವುದು ಸಾಧ್ಯ. ಅದಕ್ಕೆ ಒಂದು ಸರಳ ಉದಾಹರಣೆ ಎಂದರೆ ಕನ್ನಡದ ನುಡಿತಂತ್ರಾಂಶ.

ಕಂಪ್ಯೂಟರ್ ತಂತ್ರಜ್ಞಾನದ ಆರಂಭಿಕ ದಿನಗಳಲ್ಲಿ ಕಂಪ್ಯೂಟರ್‌ನ ಕಾರ್ಯಾಚರಣೆ ವ್ಯವಸ್ಥೆಯು ಇಂಗ್ಲಿಷ್ ಭಾಷೆಯಲ್ಲಿಯೇ ಇತ್ತು. ಕಾಲಕ್ರಮೇಣ, ಇಂಗ್ಲಿಷ್‌ನಲ್ಲಷ್ಟೇ ಅಲ್ಲದೆ, ಕಂಪ್ಯೂಟರ್ ಕಾರ್ಯಾಚರಣೆ ವ್ಯವಸ್ಥೆಗಳು ಇತರೆ ಜಾಗತಿಕ ಭಾಷೆಗಳಾದ ಫ್ರಂಚ್, ಚೀನಿ, ಜಪಾನಿ, ಸ್ಪಾನಿಶ್ ಮತ್ತು ಕೊರಿಯನ್ ಮುಂತಾದ ಭಾಷೆಗಳಲ್ಲಿ ಬಳಕೆಗೆ ಬಂದವು. ಅಂತಹ ಭಾಷಾ ಕಾರ್ಯಾಚರಣೆ ವ್ಯವಸ್ಥೆಗಳ ಮೇಲೆ ಕಾರ್ಯನಿರ್ವಹಿಸುವ ಪ್ರಸಿದ್ಧ ತಂತ್ರಾಂಶ ತಯಾರಕರ ಆನ್ವಯಿಕ ತಂತ್ರಾಂಶಗಳೂ ಇಂದು ಆಯಾಯ ಭಾಷೆಗಳಲ್ಲಿ ತಮ್ಮದೇ ಸಾಂಸ್ಕೃತಿಕ ಮತ್ತು ಭಾಷಾಶಾಸ್ತ್ರೀಯ ವೈಶಿಷ್ಟ್ಯಗಳೊಂದಿಗೆ ಬಳಕೆಗೆ ಬಂದಿವೆ. ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ಈಗ ತಮ್ಮ ಎಲ್ಲಾ ರೀತಿಯ ತಂತ್ರಾಂಶಗಳನ್ನು ಪ್ರಾದೇಶೀಕರಣಗೊಳಿಸಲು ಆರಂಭಿಸಿದ್ದಾರೆ.  ತಂತ್ರಾಂಶಗಳ ಪ್ರಾದೇಶೀಕರಣ ಎಂದರೆ ಕೇವಲ ಭಾಷಾ ಲಿಪಿಗಳನ್ನು ಅಳವಡಿಸುವುದಷ್ಟೇ ಅಲ್ಲ, ಭಾಷಾ ಲಿಪಿ ಬಳಕೆಯ ಸೌಲಭ್ಯದೊಂದಿಗೆ, ಸ್ಥಳೀಯರು ಬಳಸುವ ಅಂಕಿಗಳು ಮತ್ತು ದಿನಾಂಕಗಳ ಸ್ವರೂಪ ಎಲ್ಲವನ್ನೂ ಸಹ ಆಯಾಯ ಪ್ರದೇಶಗಳು ಮತ್ತು ಭಾಷೆಗೆ ಅನುಗುಣವಾಗಿ ರೂಪಿಸಿ ನೀಡುವುದು. ಈ ಪ್ರಾದೇಶೀಕರಣದ ಮೂಲ ಉದ್ದೇಶವೇನೆಂದರೆ ಇಂಗ್ಲಿಷೇತರರಿಗೂ ಸಹ ತಂತ್ರಾಂಶಗಳನ್ನು ಮಾರಾಟಮಾಡುವುದು ಮತ್ತು ಆ ಮೂಲಕ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವುದು. ಈ ಉದ್ದೇಶಗಳಿಗೆ ಅನುಗುಣವಾಗಿ ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ತಮ್ಮ ತಂತ್ರಾಂಶಗಳಿಗೆ ಭಾಷಾ ಹೊದಿಕೆಗಳನ್ನು ಅಳವಡಿಸುವ ಮೂಲಕ, ಸ್ಥಳೀಯ ಬಳಕೆದಾರರ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಅಗತ್ಯಗಳಿಗೆ ಅನುಗುಣವಾಗಿ ತಮ್ಮ ತಂತ್ರಾಂಶಗಳನ್ನು ಪ್ರಾದೇಶೀಕರಿಸಿ ನೀಡಿದ್ದಾರೆ.  ಈ ಪ್ರಾದೇಶೀಕರಣದ ಅಂಗವಾಗಿ, ಭಾಷಾ ಹೊದಿಕೆಗಳನ್ನು ಹೊದ್ದು ತಂತ್ರಾಂಶಗಳು ಈಗ ಭಾರತೀಯ ಭಾಷೆಗಳಲ್ಲಿಯೂ ಲಭ್ಯವಾಗಿವೆ.  ಕಾಯಾಚರಣೆ ವ್ಯವಸ್ಥೆಗಳಿಗೆ ಮತ್ತು ಆನ್ವಯಿಕ ತಂತ್ರಾಂಶಗಳಿಗೆ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್‌ಗಳನ್ನು (ಎಲ್.ಐ.ಪಿ) ತಯಾರಿಸಿ ನೀಡಲಾಗಿದೆ. ಈ ಪ್ಯಾಕ್‌ಗಳನ್ನು ಅನುಸ್ಥಾಪಿಸಿಕೊಳ್ಳುವ ಮೂಲಕ ಕಂಪ್ಯೂಟರಿನ ಸಂವಹನ ಭಾಷೆಯನ್ನು (ಇನ್‌ಸ್ಟಾಲ್) ನಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದು. ಮೈಕ್ರೋಸಾಫ್ಟ್ ಕಂಪನಿಯು ತನ್ನ ಕಾರ್ಯಾಚರಣೆ ವ್ಯವಸ್ಥೆಯಾದ ವಿಂಡೋಸ್ಮತ್ತು ಅಪ್ಲಿಕೇಷನ್ ಸಾಫ್ಟ್‌ವೇರ್ ಆದ ಎಂ.ಎಸ್.ಆಫೀಸ್ಗೆ ಕನ್ನಡ ಭಾಷೆಯ ಎಲ್.ಐ.ಪಿ.ಯನ್ನು ಸಿದ್ಧಪಡಿಸಿ ನೀಡಿದೆ. ಕನ್ನಡದ ಎಲ್.ಐ.ಪಿ.ಯನ್ನು ಭಾಷಾ ಇಂಡಿಯಾ ಜಾಲತಾಣಕ್ಕೆ (www.bhashaindia.com) ಹೋಗಿ ಡೌನ್‌ಲೋಡ್ ಮಾಡಿಕೊಂಡು, ನಂತರ, ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿ ಬಳಸಬಹುದು. ಆದರೆ, ಕಂಪ್ಯೂಟರಿನ ಸಂವಹನ ಭಾಷೆಯಾಗಿ ಎಲ್ಲರಿಗೂ ಇಂಗ್ಲಿಷ್ ರೂಢಿಯಾಗಿರುವುದರಿಂದ ಇಂತಹ ಎಲ್.ಐ.ಪಿ.ಗಳನ್ನು ಅನುಸ್ಥಾಪಿಸಿಕೊಳ್ಳುವ ಕೆಲಸಕ್ಕೆ ಹೆಚ್ಚಿನವರು ಕೈಹಾಕಿದಂತೆ ಕಾಣುವುದಿಲ್ಲ. ಇಂಗ್ಲಿಷ್ ತಿಳಿಯದಿರುವ ಕಂಪ್ಯೂಟರ್ ಬಳಕೆದಾರರು ಅತಿ ವಿರಳ. ಹೀಗಾಗಿ, ಇಂತಹ ಎಲ್.ಐ.ಪಿ.ಗಳು ಹೆಚ್ಚಾಗಿ ಬಳಕೆಗೆ ಬಂದಿಲ್ಲ ಎನ್ನಬಹುದು. ಕಂಪ್ಯೂಟರಿನಲ್ಲಿ ಕನ್ನಡವನ್ನು ಟೈಪ್‌ಮಾಡಿ ಬಳಸಿಕೊಂಡರಷ್ಟೇ ಸಾಕು. ಇನ್ನು, ಕಂಪ್ಯೂಟರು ಬಳಕೆದಾರರಾದ ನಮ್ಮೊಂದಿಗೆ ಕನ್ನಡದಲ್ಲಿಯೇ ಮಾತನಾಡಬೇಕು ಎಂಬ ಕಡ್ಡಾಯವೇನಿಲ್ಲ ಎಂಬ ಮನೋಧೋರಣೆ ನಮಗಿದ್ದರೆ, ಆಗ ಎಲ್.ಐ.ಪಿ.ಯ ಅಗತ್ಯವಿಲ್ಲ, ಅಷ್ಟೇ!.


ಕಂಪ್ಯೂಟರ್‌ನ ಸಂವಹನ ಭಾಷೆಯ ಹಿನ್ನೆಲೆ ಏನು ಎಂಬುದನ್ನು ತಿಳಿಯೋಣ. ಕೆಲಸಕಾರ್ಯಗಳನ್ನು ಅಗತ್ಯಕ್ಕೆ ತಕ್ಕಂತೆ ನಿರ್ವಹಿಸಲು ಕಂಪ್ಯೂಟರಿನಲ್ಲಿ ಕಾರ್ಯಾಚರಣೆ ವ್ಯವಸ್ಥೆ’, ‘ಆನ್ವಯಿಕ ತಂತ್ರಾಂಶಮತ್ತು ಬಳಕೆದಾರಈ ಮೂವರಲ್ಲಿ ಪರಸರ ನಡುವೆ, ಸಂವಾದ, ಸಂಪರ್ಕ, ಸ್ಪಂದನ ಮತ್ತು ವ್ಯವಹಾರಗಳು ನಡೆಯುತ್ತವೆ.

          ಬಳಕೆದಾರನು ಬಯಸುವ ಕೆಲಸಕಾರ್ಯಗಳನ್ನು ನಿರ್ವಹಿಸಲು ಕಂಪ್ಯೂಟರು ತನ್ನ ಬಳಕೆದಾರನೊಂದಿಗೆ ಸಂವಾದಿಸುತ್ತದೆ, ಸಂಪರ್ಕಿಸುತ್ತದೆ, ಸ್ಪಂದಿಸುತ್ತದೆ ಮತ್ತು ವ್ಯವಹರಿಸುತ್ತದೆ. ಇದನ್ನೆಲ್ಲಾ ಬಳಕೆದಾರ ವ್ಯಕ್ತಿಗಳೊಂದಿಗೆ ನಿರ್ವಹಿಸಲು ಕಂಪ್ಯೂಟರು ಸಹ ಬಳಕೆದಾರರ ಭಾಷೆಯನ್ನು ಉಪಯೋಗಿಸುತ್ತದೆ. ಬಹುತೇಕ ಸಂದರ್ಭಗಳಲ್ಲಿ ಬಳಕೆದಾರನೇ ಕಂಪ್ಯೂಟರಿನ ಭಾಷೆಯನ್ನು ಕಲಿತು ಅದರೊಂದಿಗೆ ಸಂವಹನ ನಡೆಸುತ್ತಾನೆ. ಅಂದರೆ, ಕಂಪ್ಯೂಟರು ಮತ್ತು ಬಳಕೆದಾರ ವ್ಯಕ್ತಿಗಳ ನಡುವ ಸಹಜ ಭಾಷೆಯೊಂದು ತನ್ನ ಪ್ರಾಮುಖ್ಯವನ್ನು ಸದಾಕಾಲ ಮೆರೆಯುತ್ತದೆ ಎಂಬುದು ಇಲ್ಲಿ ಗಮನಾರ್ಹ ವಿಷಯ. ಕಂಪ್ಯೂಟರಿಗೆ ಸಹಜ ಭಾಷೆಯು ತಿಳಿಯುವುದಿಲ್ಲ. ಅದೊಂದು ವಿದ್ಯುನ್ಮಾನ ಯಂತ್ರವಾದ್ದರಿಂದ ಅದಕ್ಕೆ ಯಂತ್ರಭಾಷೆ ಮಾತ್ರ ತಿಳಿಯುತ್ತದೆ. ಆದರೆ, ಕಂಪ್ಯೂಟರ್ ಬಳಕೆದಾರರಿಗೆ ತಮ್ಮ ಸಹಜ ಭಾಷೆಯು ಮಾತ್ರ ತಿಳಿಯುತ್ತದೆ. ಇವೆರಡು ಭಾಷೆಗಳ ನಡುವೆ ಸಮನ್ವಯ ಕಾಯ್ದುಕೊಳ್ಳಲು ಇರುವ ಭಾಷೆಯೇ ಉನ್ನತ ಸ್ತರ ಭಾಷೆಅಂದರೆ, ಹೈ-ಲೆವೆಲ್ ಲಾಂಗ್ವೇಜ್. ಇದನ್ನು ಬಳಸಿಯೇ ಕಂಪ್ಯೂಟರ್ ಇಂಜಿನಿಯರ್‌ಗಳು ಸಾವಿರಾರು ಪ್ರೋಗ್ರಾಂಗಳನ್ನು ಬರೆದು ಒಂದು ತಂತ್ರಾಂಶವನ್ನು ಸಿದ್ಧಪಡಿಸುತ್ತಾರೆ.

       ತಂತ್ರಾಂಶಗಳಲ್ಲಿ ನಿಗದಿಪಡಿಸಿರುವ ಕೆಲಸ-ಕಾರ್ಯಗಳನ್ನು ನಿರ್ವಹಿಸುವಾಗ, ಅಗತ್ಯವಿದ್ದರೆ, ಅಗತ್ಯವಿದ್ದಾಗಲೆಲ್ಲಾ, ತನಗೆ ಬೇಕಾದ ಹೆಚ್ಚಿನ ಮಾರ್ಗದರ್ಶನ, ಸೂಚನೆಗಳನ್ನು ಕಂಪ್ಯೂಟರ್ ಬಳಕೆದಾರನಿಂದ ಪಡೆದು ಕಂಪ್ಯೂಟರ್ ತನ್ನ ಕೆಲಸವನ್ನು ಪೂರೈಸುತ್ತದೆ. ಇಂತಹ  ಸೂಚನೆಗಳನ್ನು ಪಡೆಯಲು ಕಂಪ್ಯೂಟರ್ ಸಾಂದರ್ಭಿಕವಾದ ಸಂದೇಶಗಳನ್ನು ಬಳಕೆದಾರನಿಗೆ ಸ್ಪಷ್ಟವಾಗಿ ಅರ್ಥವಾಗುವಂತೆ ಪ್ರಕಟಿಸುವ ಮೂಲಕ ಹೆಚ್ಚಿನ ಮಾರ್ಗದರ್ಶನ ಮತ್ತು ಸೂಚನೆಗಳನ್ನು ನಿರೀಕ್ಷಿಸುತ್ತದೆ. ಇದನ್ನು ಟೆಕ್ಟ್ ಡಯಲಾಗ್ಎಂದು ಕರೆಯಲಾಗಿದೆ.

       ಕಂಪ್ಯೂಟರ್‌ನ ಜೀವನಾಡಿ ಮತ್ತು ಅಡಿಪಾಯವಾದ ಕಾರ್ಯಾಚರಣೆ ವ್ಯವಸ್ಥೆ ಮತ್ತು ಅಂತಹ ವ್ಯವಸ್ಥೆಯ ಮೇಲೆ ಕೆಲಸ ಮಾಡುವ ಆನ್ವಯಿಕ ತಂತ್ರಾಂಶಗಳು ಬಳಕೆದಾರನೊಂದಿಗೆ ಸಹಜ ಭಾಷೆಯಲ್ಲಿ ಹೀಗೆ ಸಂವಹನ ಮಾಡಿದರೆ ಬಳಕೆದಾರರಿಗೆ ಸಂತೋಷ ತರುವ ವಿಷಯವೇ ಸರಿ.  ಹಾಗೆ ಕನ್ನಡದಲ್ಲಿಯೇ ಸಂವಹಿಸುವಂತೆ ನಿರ್ದೇಶಿಸಿ ತಂತ್ರಾಂಶಗಳನ್ನು ತಯಾರಿಸುವುದು ಇಂದು ಸವಾಲಿನ ಕೆಲಸವಾಗಿ ಉಳಿದಿಲ್ಲ.  ಪ್ರತಿಯೊಬ್ಬ ಭಾಷಿಕ ಬಳಕೆದಾರನು ಕಂಪ್ಯೂಟರ್ ತನ್ನದೇ ಆದ ಭಾಷೆಯಲ್ಲಿ ಸಂವಹಿಸಬೇಕು ಎಂದು ಅಪೇಕ್ಷಿಸುವುದು ಸಹಜ.  ಕಂಪ್ಯೂಟರ್ ವಿವಿಧ ಭಾಷೆಗಳಲ್ಲಿ ಸಂವಹನವನ್ನು ಮಾಡಲು ಶಕ್ತವಾಗುವಂತೆ ಬೇರೆ ಬೇರೆ ಭಾಷಾ ಆವೃತ್ತಿಗಳನ್ನು ಮತ್ತು ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್ಗಳನ್ನು ಸಿದ್ಧಪಡಿಸಿರುವುದು ಕಂಪ್ಯೂಟರ್ ಭಾಷಾ ತಂತ್ರಜ್ಞಾನದ ಮಹತ್ವದ ಮೈಲಿಗಲ್ಲಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...