ವಿಷಯಕ್ಕೆ ಹೋಗಿ

12. ಇನ್ನೂ ವಿಂಡೋಸ್ ಎಕ್ಸ್‌ಪಿ ಬಳಸುತ್ತಿದ್ದೀರಾ? ಕನ್ನಡ ಬಳಕೆಗಾಗಿ ಇಲ್ಲಿವೆ ಕೆಲವು ಟಿಪ್ಸ್‌ಗಳು


ಪದತಂತ್ರಾಂಶವನ್ನು ಅನುಸ್ಥಾಪಿಸಿಕೊಂಡು ಬಳಸುವಲ್ಲಿ ನೀವು ಯಶಸ್ವಿಯಾಗಿದ್ದರೆ, ಅದು ನಿಜಕ್ಕೂ ಅಭಿನಂದನೀಯ. ಕೆಲವರು ಇನ್ನೂ ವಿಂಡೋಸ್ ಎಕ್ಸ್‌ಪಿ ಆಪರೇಟಿಂಗ್ ಸಿಸ್ಟಂ (ಓ.ಎಸ್.) ಅನ್ನು ಬಳಸುತ್ತಿರುವುದರಿಂದ ಅಂತಹ ಕಂಪ್ಯೂಟರುಗಳಲ್ಲಿ ಪದತಂತ್ರಾಂಶವನ್ನು ಬಳಸಲು ಅನುವಾದಾಗ ಸಮಸ್ಯೆ ಕಂಡುಬಂದಿದೆ.  ಟೈಪ್ ಮಾಡಿದಾಗ ಕನ್ನಡ ಅಕ್ಷರಗಳು ಮೂಡಿಬರುವ ಬದಲಾಗಿ. ಚಿಕ್ಕಚಿಕ್ಕ ಚೌಕಾಕಾರದ ಡಬ್ಬಿಗಳ ಸಾಲುಗಳು ಮೂಡಿಬರುತ್ತವೆ. ಕಂಪ್ಯೂಟರಿಗೆ ಅಕ್ಷರಗಳ ಎನ್‌ಕೋಡಿಂಗ್ಅರ್ಥವಾಗುತ್ತಿದೆ, ಆದರೆ, ಆ ಅಕ್ಷರಗಳನ್ನು ಪ್ರದರ್ಶಿಸಲು ಫಾಂಟ್ಇಲ್ಲ ಎಂದರ್ಥ. ಇದಕ್ಕೆ ತಕ್ಷಣದ ಪರಿಹಾರವೆಂದರೆ, ಂಡಿiಚಿಟ ಒS Uಟಿiಛಿoe ಫಾಂಟ್‌ನ್ನು ಆಯ್ಕೆ ಮಾಡಿಕೊಂಡು ಟೈಪ್‌ಮಾಡಬಹುದು. ಈ ಫಾಂಟ್ ನಿಮ್ಮ ಸಿಸ್ಟಂನಲ್ಲಿ ಇಲ್ಲವೆಂದಾದರೆ, ಇಂಟರ್‌ನೆಟ್‌ನಲ್ಲಿ ಹೋಗಿ ಈ ಫಾಂಟನ್ನು ಡೌನ್‌ಲೋಡ್ ಮಾಡಿಕೊಂಡು ವಿಂಡೋಸ್‌ನ ಫಾಂಟ್ ಫೋಲ್ಡರಿನಲ್ಲಿ ಕಾಪಿ ಮಾಡಬಹುದು.  ತುಂಗಾಯುನಿಕೋಡ್ ಫಾಂಟ್‌ನ್ನು ಸಹ ಡೌನ್‌ಲೋಡ್ ಮಾಡಿಕೊಂಡು ಅಳವಡಿಸಿಕೊಂಡರೆ ಸಮಸ್ಯೆ ಪರಿಹಾರವಾಗುತ್ತದೆ. ಆದರೆ, ತುಂಗಾ ಫಾಂಟು ಹಳೆಯ ಆವೃತ್ತಿಯದ್ದಾಗಿದ್ದರೆ ಮಾತ್ರ ಎಕ್ಸ್‌ಪಿ ಜೊತೆ ಅದು ಕೆಲಸ ಮಾಡುತ್ತದೆ ಹೊಸ ಆವೃತ್ತಿಯದ್ದಾದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು.

ವಿಂಡೋಸ್ ಎಕ್ಸ್‌ಪಿ ಮತ್ತು ತದನಂತರದ ಓ.ಎಸ್.ಗಳಲ್ಲಿ ಯುನಿಕೋಡ್ ಎನ್‌ಕೋಡಿಂಗ್ ಸಹಿತ ಕನ್ನಡ ಬಳಕೆಯ ಸೌಲಭ್ಯಗಳನ್ನು ನೀಡಲಾಗಿದೆ. ಎಕ್ಸ್‌ಪಿಯಲ್ಲಿ ಕನ್ನಡ ಭಾಷಾ ಬಳಕೆಗಾಗಿ ಕೆಲವೊಂದು ಇನ್‌ಸ್ಟಲೇಷನ್‌ಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಎಕ್ಸ್‌ಪಿ ಸೀಡಿಯನ್ನು ನೀಡುವಂತೆ ಕಂಪ್ಯೂಟರ್ ಕೋರುತ್ತದೆ. ಈಗ ವಿಂಡೋಸ್ ಎಕ್ಸ್‌ಪಿ ಇನ್‌ಸ್ಟಲೇಷನ್ ಸೀಡಿಗಳು ಸಿಗುವುದೇ ಕಷ್ಟ. ಮೈಕ್ರೋಸಾಫ್ಟ್ ಕಂಪನಿಯು ಎಕ್ಸ್‌ಪಿಗೆ ತಾನು ನೀಡುತ್ತಿದ್ದ ಬಳಕೆದಾರರ ಬೆಂಬಲವನ್ನು ಹಿಂತೆಗೆದುಕೊಂಡಿದೆ.
ವಿಂಡೋಸ್ ಎಕ್ಸ್‌ಪಿ ಇನ್‌ಸ್ಟಲೇಷನ್ ಸೀಡಿ ನಿಮ್ಮಲ್ಲಿದ್ದರೆ, ಈಗಲೂ ಕನ್ನಡ ಭಾಷಾ ಬಳಕೆಯನ್ನು ಸಕ್ರಿಯಗೊಳಿಸಿಕೊಳ್ಳಬಹುದು. ವಿಂಡೋಸ್ ಎಕ್ಸ್‌ಪಿಯ ಕಂಟ್ರೋಲ್ ಪ್ಯಾನೆಲ್‌ನಲ್ಲಿನ ರೀಜನಲ್ ಅಂಡ್ ಲಾಂಗ್ವೇಜ್ ಆಪ್ಷನ್ಸ್ಎಂಬ ವಿಭಾಗದಲ್ಲಿನ ಲಾಂಗ್ವೇಜಸ್ಟ್ಯಾಬ್‌ನಲ್ಲಿರುವ ಇನ್ಸ್ಟಾಲ್ ಕಾಂಪ್ಲೆಕ್ಸ್ ಸ್ಕ್ರಿಪ್ಸ್ಟ್ಎಂಬುದನ್ನು ಕ್ಲಿಕ್‌ಮಾಡಿ, ಹಲವು ಮಾರ್ಗಸೂಚಿಗಳನ್ನು ಅನುಸರಿಸಿದರೆ ಕನ್ನಡದ ಬಳಕೆಗಾಗಿ ಎಕ್ಸ್‌ಪಿ ಸಜ್ಜುಗೊಳ್ಳುತ್ತದೆ. ತುಂಗಾಫಾಂಟ್ ಸಹಿತ ಕೆಲವೊಂದು ಫೈಲ್‌ಗಳು ಕಾಪಿಯಾಗುತ್ತವೆ. ಕಂಪ್ಯೂಟರ್ ರಿಬೂಟ್ ಆದನಂತರದಲ್ಲಿ, ಇದೇ ಲಾಂಗ್ಜೇಜ್ ಸೆಟ್ಟಿಂಗ್‌ಗಳಲ್ಲಿ ಆಡ್ಎಂಬುದನ್ನು ಕ್ಲಿಕ್‌ಮಾಡುವ ಮೂಲಕ ಕನ್ನಡವನ್ನು ಸೇರಿಸಿ ಬಳಕೆ ಆರಂಭಿಸಬೇಕು. ಕನ್ನಡ ಟೈಪ್ ಮಾಡಲು ಎಕ್ಸ್‌ಪಿಯಲ್ಲಿ ಇನ್ಸ್‌ಸ್ಕ್ರಿಪ್ಟ್ಕೀಲಿಮಣೆ ವಿನ್ಯಾಸವನ್ನು ನೀಡಲಾಗಿದೆ. ಕರ್ನಾಟಕ ರಾಜ್ಯ ಸರಕಾರದ ಶಿಷ್ಟ ವಿನ್ಯಾಸ ಅಥವಾ ಬೆರಳಚ್ಚುಯಂತ್ರದ ವಿನ್ಯಾಸ ಇತ್ಯಾದಿಗಳು ಅವಶ್ಯಕತೆ ಇದೆ ಎಂದಾದರೆ, ತಿತಿತಿ.bhಚಿshಚಿiಟಿಜiಚಿ.ಛಿom ಜಾಲತಾಣದಿಂದ ಕನ್ನಡದ ಐಎಂಇ-೧’ (ಇನ್‌ಪುಟ್ ಮೆಥೆಡ್ ಎಡಿಟರ್-೧) ಎಂಬುದನ್ನು ಡೌನ್‌ಲೋಡ್ ಮಾಡಿಕೊಂಡು ಅನುಸ್ಥಾಪಿಸಿಕೊಳ್ಳಬಹುದು.

ವಿಂಡೋಸ್-ಎಕ್ಸ್‌ಪಿ ಬಳಸುವ ಬಹುತೇಕ ಬಳಕೆದಾರರಿಗೆ ಅದರಲ್ಲಿ ಕನ್ನಡವನ್ನು ಅಳವಡಿಸಿ ನೀಡಲಾಗಿದೆ ಎಂಬ ಕುರಿತಾದ ಪ್ರಾಥಮಿಕ ಮಾಹಿತಿಯೇ ಇರಲಿಲ್ಲ. ಆದ್ದರಿಂದ, ಎಕ್ಸ್‌ಪಿಯಲ್ಲಿ ಕನ್ನಡವನ್ನು ಸಕ್ರಿಯಗೊಳಿಸಿ ಬಳಸುವವರ ಸಂಖ್ಯೆ ವಿರಳವಾಗಿತ್ತು. ಇಂದು, ವಿಂಡೋಸ್ ೭ ಮತ್ತು ನಂತರದ ಆವೃತ್ತಿಗಳಲ್ಲಿ ಕನ್ನಡ ಭಾಷಾ ಬೆಂಬಲ ಪಡೆಯಲು ಅಷ್ಟೊಂದು ಕಸರತ್ತು ಮಾಡುವ ಅವಶ್ಯಕತೆ ಇಲ್ಲ. ಕಂಟ್ರೋಲ್ ಪ್ಯಾನೆಲ್‌ಗೆ ಹೋಗಿ ಆಡ್ಕೀಬೋರ್ಡ್ ಎಂಬ ಆಪ್ಷನ್‌ನ್ನು ಆಯ್ದುಕೊಂಡು ಬೇಕಾದ ಭಾಷೆಯನ್ನು ಅಳವಡಿಸಿಕೊಳ್ಳಬಹುದು. ಪ್ರತ್ಯೇಕವಾಗಿ ಓ.ಎಸ್.ಸೀಡಿಯನ್ನೇನೂ ಅದು ಕೇಳುವುದಿಲ್ಲ.  ವಿಂಡೋಸ್ ಎಕ್ಸ್‌ಪಿಗೂ ಮೊದಲಿನ ಆವೃತ್ತಿಗಳಲ್ಲಿ ಕನ್ನಡದ ಭಾಷಾ ಬೆಂಬಲ ಇರಲಿಲ್ಲ. ನಮ್ಮ ಸ್ಥಳೀಯ ತಂತ್ರಾಂಶ ತಯಾರಕರು ಕನ್ನಡಿಗರ ಅವಶ್ಯಕತೆಗಳ ಅನುಸಾರ ಕಾಲಕಾಲಕ್ಕೆ ಲಿಪಿತಂತ್ರಾಂಶಗಳನ್ನು ಸಿದ್ಧಪಡಿಸಿ ನೀಡಿದರು.

ಮೈಕ್ರೋಸಾಫ್ಟ್ ವಿಂಡೋಸ್ ಓ.ಎಸ್.ನ ಮೇಲೆ ಕಾರ್ಯನಿರ್ವಹಿಸುವ, ಫಾಂಟುಗಳು ಎಂದು ಕರೆಯಲಾಗುವ ಕನ್ನಡದ ಪ್ರತ್ಯೇಕ ಲಿಪಿತಂತ್ರಾಂಶಗಳುಮೊದಲಿಗೆ ಬಳಕೆಗೆ ಬಂದವು. ಮಾರುಕಟ್ಟೆಯಲ್ಲಿ ಲಭ್ಯವಿದ್ದ ಲಿಪಿತಂತ್ರಾಂಶಗಳೆಂದರೆ; ಪ್ರಕಾಶಕ್ (ಸೊನಾಟ ಕಂಪನಿ, ಬೆಂಗಳೂರು), ಶ್ರೀಲಿಪಿ (ಮಾಡ್ಯುಲರ್ ಸಿಸ್ಟಂಸ್, ಪುಣೆ), ಆಕೃತಿ (ಸೈಬರ್‌ಸ್ಕೇಪ್ ಮಲ್ಟಿಮೀಡಿಯಾ ಲಿ., ಬೆಂಗಳೂರು), ವಿನ್‌ಕೀ (ಎಸ್.ಆರ್.ಜಿ.), ಸುರಭಿ (ಆಪಲ್ ಸಾಫ್ಟ್, ಬೆಂಗಳೂರು) ಕೈರಳಿ (ಬಿಯಾನ್ ಕಂಪ್ಯೂಟರ‍್ಸ್) ಪುಣೆಯ ಸಿಡ್ಯಾಕ್‌ನ ಐಲೀಪ್ಇತ್ಯಾದಿಗಳು. 

ಪ್ರಸ್ತುತ, ಲಭ್ಯವಿರುವ ಉಚಿತ ಕನ್ನಡ ಲಿಪಿತಂತ್ರಾಂಶಗಳೆಂದರೆ; ಕನ್ನಡ ಗಣಕ ಪರಿಷತ್ತು ತಯಾರಿಸಿರುವ ನುಡಿಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುವೆಂಪು ತಂತ್ರಾಂಶಮತ್ತು ಕನ್ನಡದ ಉತ್ಸಾಹಿ ತಂತ್ರಜ್ಞರಾದ ಲೋಹಿತ್ ಡಿ.ಶಿವಮೂರ್ತಿ ಅಭಿವೃದ್ಧಿಪಡಿಸಿರುವ ಯುನಿಕೋಡ್ ಫಾಂಟ್ ಬೆಂಬಲಿತ ಪದಲಿಪಿತಂತ್ರಾಂಶ. ಬರಹಮೊದಲಿಗೆ ಉಚಿತವಾಗಿತ್ತು ಈಗ ಅದನ್ನು ಬಳಸಲು ಹಣ ನೀಡಬೇಕಾಗಿದೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...