ವಿಷಯಕ್ಕೆ ಹೋಗಿ

10. ಕನ್ನಡದ ಮಾತನ್ನು ಅಕ್ಷರಕ್ಕಿಳಿಸುವ ಮೋಡಿಗಾರ ‘ಲಿಪಿಕಾರ್’ ಕಿರುತಂತ್ರಾಂಶ




ಸ್ಮಾರ್ಟ್‌ಫೋನುಗಳಲ್ಲಿ ಕನ್ನಡಲಿಪಿಯನ್ನು ಮೂಡಿಸುವ ಸಂಕಷ್ಟಮತ್ತು ಆಲಸ್ಯಗಳ ಕುರಿತು ಇದೇ ಅಂಕಣದಲ್ಲಿ ಓದಿದ್ದೀರಿ. ಇವೆಲ್ಲ ಸಮಸ್ಯೆಗಳಿಗೂ ಒಂದು ಪರಿಹಾರ ಎಂಬಂತೆ ಲಿಪಿಕಾರ್ಆಪ್ ಅಭಿವೃದ್ಧಿಗೊಂಡು ಬಳಕೆಗೆ ಬಂದಿದೆ.  ಈಗ ಸ್ಮಾರ್ಟ್‌ಫೋನುಗಳಲ್ಲಿ ಕನ್ನಡ ಲಿಪಿಯನ್ನು ಮೂಡಿಸುವುದು ಸಂಕಷ್ಟದ ಕೆಲಸವೇನಲ್ಲ. ಈಗ ಅದೊಂದು ಆಟದಂತಹ ಕೆಲಸ. ಸ್ಮಾರ್ಟ್‌ಫೋನಿನಲ್ಲಿ ಇತ್ತಕಡೆಯಿಂದ ನೀವು ಒಂದು ವಾಕ್ಯವನ್ನು ಮಾತನಾಡಿ ಮಗಿಸಿದರೆ ಸಾಕು. ನಿಮ್ಮ ಮಾತು ನೇರವಾಗಿ ಸರ್ವರ್‌ಗೆ ಹೋಗಿ ಅತ್ತಲಿಂದ ಕನ್ನಡ ಲಿಪಿಯಾಗಿ ಸಿದ್ಧಗೊಂಡು ನಿಮ್ಮ ಸ್ಕ್ರೀನ್‌ನ ಮೇಲೆ ಮೂಡುತ್ತದೆ. ಅದೇ ಲಿಪಿಕಾರನ ಅದ್ಭುತ ಚಮತ್ಕಾರ. ಹೌದು, ಈಗ ಕನ್ನಡಕ್ಕೂ ಬಂದಿದೆ ಲಿಪಿಕಾರ್ಎಂಬ ಹೆಸರಿನ ಸ್ಪೀಚ್-ಟು-ಟೆಕ್ಸ್ಟ್ ಆಪ್. ಇದು ನಾವು ಆಡಿದ ಮಾತನ್ನು ಪಠ್ಯಕ್ಕೆ ರೂಪಾಂತರಿಸುವ ಕಿರುತಂತ್ರಾಂಶವಾಗಿದೆ. ಆಂಡ್ರಾಯ್ಡ್ ಓ.ಎಸ್. (ಆಪರೇಟಿಂಗ್ ಸಿಸ್ಟಂ) ಮೇಲೆ ಕಾರ್ಯನಿರ್ವಹಿಸುವ ಈ ಆಪ್ ಪ್ರಸ್ತುತ ಆನ್‌ಲೈನ್‌ನಲ್ಲಿ ಮಾತ್ರವೇ ಕಾರ್ಯನಿರ್ವಹಿಸುತ್ತದೆ. ಅಂದರೆ, ಈ ಆಪ್ ಬಳಸುವಾಗ ಅಂತರಜಾಲ ಸಂಪರ್ಕ ಇರಲೇಬೇಕು.

       ಅಕ್ಷರಕೀಲಿಗಳನ್ನು ಒತ್ತುವ ಸಂಕಷ್ಟ,  ಕಾಗುಣಿತ-ಒತ್ತಕ್ಷರಗಳನ್ನು ಮೂಡಿಸಲು ಹಲವು ಕೀಲಿಗಳನ್ನು ಒತ್ತುವ ಕಸರತ್ತಿನಿಂದಾಗಿ ಸ್ಮಾರ್ಟ್‌ಫೋನಿನಲ್ಲಿ ಕನ್ನಡ ಬಳಸುವುದು ಕಷ್ಟಕರ ಎಂಬ ಅಭಿಪ್ರಾಯವಿತ್ತು. ಇದಕ್ಕೆ ಉತ್ತರವಾಗಿ ಕೈಬೆರಳಲ್ಲಿ ಬರೆಯುವ ಗೂಗಲ್ ಹ್ಯಾಂಡ್‌ರೈಟಿಂಗ್ ಇನ್‌ಪುಟ್ಬಂತು. ಇದೀಗ ಬರೆಯುವ ತಾಪತ್ರಯವೂ ಇಲ್ಲದೆ ಕೇವಲ ಮಾತನಾಡಿದರೆ ಸಾಕು ಕನ್ನಡಲಿಪಿ ಮೂಡುವ ಸರಳವಾದ ಆಪ್ ಬಿಡುಗಡೆಯಾಗಿ ಕನ್ನಡಿಗರ ಗಮನ ಸೆಳೆಯುತ್ತಿದೆ.  ಇಂಟರ್‌ನೆಟ್ ಸಂಪರ್ಕ ಇಲ್ಲದಿದ್ದಾಗಲೂ ಬಳಸಲು ಅನುವಾಗುವಂತೆ ಆಫ್‌ಲೈನ್ ಆಪ್ ಆಗಿ ಸಾಧ್ಯವಾದಷ್ಟು ಬೇಗನೆ ದೊರೆಯುವಂತಾಗಲಿ ಎಂದು ಬಹಳಷ್ಟು ಜನರು ಬಯಸುತ್ತಿದ್ದಾರೆ. 

ಗೂಗಲ್ ಪ್ಲೇಸ್ಟೋರ್‌ನಿಂದ ಈ ಲಿಪಿಕಾರ್ಆಪ್‌ನ್ನು ಅನುಸ್ಥಾಪಿಸುವಾಗ ಕೆಲವು ಸೂಚನೆಗಳನ್ನು ಪಾಲಿಸುವ ಮೂಲಕ ಯಶಸ್ವಿಬಳಕೆಗೆ ಆಪ್‌ನ್ನು ಮೊದಲಿಗೆ ಸಜ್ಜುಗೊಳಿಸಬೇಕು. ಕೆಲವು ಅನುಮತಿಗಳನ್ನು ಕೇಳಿದಾಗ ಂಟಟoತಿಎಂದು ಆಯ್ದೆಮಾಡಿ ಮುಂದುವರೆಯಬೇಕು. ಆಂಡ್ರಾಯ್ಡ್ ಓ.ಎಸ್.ಹಳೆಯ ಆವೃತ್ತಿಗಳು ಇರುವ ಹಳೆಯ ಮಾಡೆಲ್‌ಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಲಿಪಿಕಾರ್ಆಪ್‌ನ ಧ್ವನಿಗ್ರಹಣ ವ್ಯವಸ್ಥೆ ಅನುಸ್ಥಾಪನೆಗೊಳ್ಳುವುದಿಲ್ಲ. ಆಗ, ಕೇವಲ ಕೀಬೋಡ್ ಒತ್ತುವ ಮೂಲಕ ಕನ್ನಡ ಮೂಡಿಸುವ ಕೆಲಸ ನಿರ್ವಹಿಸಬಹುದಷ್ಟೇ. ಕಂದುಬಣ್ಣದಲ್ಲಿರುವ ಮೈಕ್ರೋಫೋನ್ಚಿಹ್ನೆಯು ಮೂಡಿಬಂದಿದ್ದಲ್ಲಿ, ಧ್ವನಿಗ್ರಹಣ ವ್ಯವಸ್ಥೆ ಅನುಸ್ಥಾಪನೆಗೊಂಡಿದೆ ಎಂದು ಅರ್ಥ. ಮೈಕ್ರೋಫೋನ್ ಚಿಹ್ನೆಯನು ಒಮ್ಮೆ ಒತ್ತಿದರೆ, ‘ಕೇಳುತ್ತಿದ್ದೇನೆ....ಎಂಬ ಸಂದೇಶ ಪ್ರಕಟಿಸುವ ಈ ಆಪ್ ವಾಕ್ಯವನ್ನು ಉಚ್ಛರಿಸಲು ನಮಗೆ ೧೫ ಸೆಕೆಂಡುಗಳ ಕಾಲ ಅವಕಾಶ ನೀಡುತ್ತದೆ. ಕಾಲಾವಕಾಶದೊಳಗೆ ಮಾತು ಮುಗಿದರೆ ಡನ್ಬಟನ್ ಒತ್ತಬೇಕು.  ಕಾಲಾವಕಾಶ ಮುಗಿದರೆ ಕೇಳಿಸಿಕೊಳ್ಳುವುದನ್ನು ತಾನಾಗಿಯೇ ನಿಲ್ಲಿಸಿ, ಲಿಪೀಕರಿಸುವ ಕೆಲಸ ಆರಂಭಗೊಳ್ಳುತ್ತದೆ. ಪ್ರಕಟಿತ ಲಿಪಿರೂಪದಲ್ಲಿ ಏನಾದರೂ ತಪ್ಪುಗಳಿದ್ದರೆ, ಕೀಬೋರ್ಡ್ ಬಳಸಿ ಅದನ್ನು ಸರಿಪಡಿಸಿಕೊಳ್ಳಬಹುದು. ಲಿಪಿಮೂಡಿಕೆಯ ಖಚಿತತೆಯು ನಮ್ಮ ಉಚ್ಛಾರಣೆಯ ಗುಣಮಟ್ಟವನ್ನು ಅವಲಂಬಿಸಿದೆ. ಉಚ್ಛಾರಣೆ ಸ್ಪಷ್ಟವಾಗಿದ್ದು ಸಕಾಲಿಕವಾಗಿದ್ದರೆ ಲಿಪಿಯೂ ಸಹ ಆಡಿದ ಮಾತಿನಂತೆಯೇ ತಪ್ಪಿಲ್ಲದೆ ಶೇಕಡಾ ನೂರರಷ್ಟು ಕರಾರುವಾಕ್ಕಾಗಿ ಪ್ರಕಟಗೊಳ್ಳುತ್ತದೆ.

ಲಿಪಿಕಾರ್ಆಪ್‌ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಆಯ್ಕೆಗಳೂ ಇವೆ. ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಪ್ರತ್ಯೇಕವಾಗಿ ಆಡಿದ ಮಾತುಗಳೂ ಸಹ ಆಯಾಯ ಲಿಪಿಗಳಲ್ಲಿ ಮೂಡಿಬರುತ್ತವೆ. ಕನ್ನಡ ವಾಕ್ಯದ ನಂತರ, ‘ಇಂಗ್ಲಿಷ್ಎಂಬುದನ್ನು ಆಯ್ಕೆ ಮಾಡಿಕೊಂಡು ಇಂಗ್ಲಿಷ್‌ನಲ್ಲಿ ಹೇಳಿದ ವಾಕ್ಯವು ಇಂಗ್ಲಿಷ್ ಲಿಪಿಯಲ್ಲಿ ಪ್ರಕಟಗೊಳ್ಳುತ್ತದೆ. ಮತ್ತೆ ಕನ್ನಡಎಂಬುದನ್ನು ಒತ್ತಿ ಕನ್ನಡದಲ್ಲಿ ಮಾತು ಮುಂದುವರೆಸಬಹುದು. ಮಾತುಗಳು ಒಂದೆರಡು ವಾಕ್ಯಗಳಿಗೆ ಸೀಮಿತವಾಗಿದ್ದರೆ ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಒಮ್ಮೆಗೆ ಹೆಚ್ಚಿನ ವಾಕ್ಯಗಳನ್ನು ಹೇಳಿದರೆ, “ಅನಿರೀಕ್ಷಿತ ತೊಡಕುಂಟಾಗಿದೆ....ಎಂಬ ಸಂದೇಶ ಪ್ರಕಟವಾಗುತ್ತದೆ. ಅಂಕಿಗಳೂ ಸಹ ಕನ್ನಡದಲ್ಲಿಯೇ ಇರುವುದು ಒಂದು ವಿಶೇಷ. ಇಂಗ್ಲಿಷ್ ಅಂಕಿಗಳು ಬೇಕಾದರೆ ಅಥವಾ ಈಗಾಗಲೇ ಅಭ್ಯಾಸವಾಗಿರುವ ಬೇರೊಂದು ಕೀಬೋಡ್ ಆಯ್ಕೆ ಮಾಡಿಕೊಳ್ಳಬೇಕಾದರೆ ತಕ್ಷಣದಲ್ಲಿ ಅದು ಸಾಧ್ಯವಾಗುವುದಿಲ್ಲ. ಬದಲಾವಣೆಗಾಗಿ ನೇರ, ಸರಳ ಆಯ್ಕೆಗಳನ್ನು ಮಾಡಿಕೊಳ್ಳಲು ಈ ಆಪ್‌ನಲ್ಲಿ ಇನ್ನೂ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಬಳಕೆದಾರರ ಹಿಮ್ಮಾಹಿತಿ (ಫೀಡ್‌ಬ್ಯಾಕ್) ಆಧರಿಸಿ ಮುಂದಿನ ದಿನಗಳಲ್ಲಿ ಈ ಆನ್‌ಲೈನ್ ಆಪ್ ಎಲ್ಲ ಆಯಾಮಗಳಲ್ಲಿ ಮತ್ತಷ್ಟು ಸುಧಾರಣೆಗೊಳ್ಳುತ್ತದೆ ಎಂದು ಭಾವಿಸಬಹುದು.

ನೀವು ಆಂಡ್ರಾಯ್ಡ್ ಫೋನು ಬಳಕೆದಾರರಾಗಿದ್ದಲ್ಲಿ, ಇನ್ನೇಕೆ ತಡ? ಗೂಗಲ್ ಪ್ಲೇಸ್ಟೋರ್‌ಗೆ ಹೋಗಿ ಲಿಪಿಕಾರನನ್ನು ಬರಮಾಡಿಕೊಳ್ಳಿ. ಇ-ಮೇಯ್ಲ್, ವಾಟ್ಸಾಪ್,  ಫೇಸ್‌ಬುಕ್, ಟ್ವಿಟ್ಟರ್ ಅಪ್‌ಡೇಟ್‌ಗಳು ಹೀಗೆ ಅಗತ್ಯವಿದ್ದೆಡೆಯೆಲ್ಲಾ ಕೇವಲ ಮಾತನ್ನಾಡುವ ಮೂಲಕ ಕನ್ನಡ ಪಠ್ಯವನ್ನು ಮೂಡಿಸಿ. ಕನ್ನಡಕ್ಕಾಗಿ ಕೀಲಿಯೊತ್ತುಗಳ ಕಿರಿಕಿರಿ ಮತ್ತು ಕೈಬೆರಳಿನಿಂದ ಬರೆಯುವ ಆಲಸ್ಯ ಇವುಗಳಿಂದ ಹೊರಬಂದು ಲಿಪಿಕಾರನ ಮೋಡಿಯನ್ನು ನೋಡಿ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...