ವಿಷಯಕ್ಕೆ ಹೋಗಿ

4. ನಿಮ್ಮ ಕೈಬೆರಳನ್ನೇ ಪೆನ್‌ನಂತೆ ಬಳಸಿ ಮೊಬೈಲ್‌ನಲ್ಲಿ ಕನ್ನಡವನ್ನು ಬರೆಯಿರಿ










      ಈಗ ಕೈಬೆರಳನ್ನು ಪೆನ್‌ನಂತೆ ಬಳಸಿ ಸ್ಮಾರ್ಟ್‌ಫೋನ್‌ನ ಟಚ್‌ಸ್ಕ್ರೀನ್‌ನ ಮೇಲೆ ಕನ್ನಡ ಬರೆಯಬಹುದು. ಮೊಬೈಲ್‌ನಲ್ಲಿ ಕನ್ನಡ ಟೈಪ್ ಮಾಡುವ ಕಿರಿಕಿರಿಯಿಂದ ಬೇಸತ್ತಿರುವವರಿಗೆ ವರದಾನವಾಗಿ ಕಳೆದ ಎರಡು ವರ್ಷಗಳ ಹಿಂದೆಯೇ ಗೂಗಲ್‌ನ ಹ್ಯಾಂಡ್‌ರೈಟಿಂಗ್ ಇನ್‌ಪುಟ್ಸೌಲಭ್ಯ ಲೋಕಾರ್ಪಣೆಗೊಂಡಿದೆ.
      
       ಕನ್ನಡ ಸೇರಿದಂತೆ ಒಂಭತ್ತು ಭಾರತೀಯ ಭಾಷೆಗಳಿಗಾಗಿ ಗೂಗಲ್ ಕೈಬರಹದ ಮೂಲಕ ಭಾಷಾಲಿಪಿಗಳನ್ನು ಮೂಡಿಸುವ ಸವಲತ್ತು ನೀಡಿದೆ. ನೀವು ಆಂಡ್ರಾಯ್ಡ್ ಓ.ಎಸ್. ಇರುವ ಸ್ಮಾಟ್ ಫೋನ್ ಬಳಸುತ್ತಿದ್ದರೆ ಪ್ಲೇ ಸ್ಟೋರ್ಗೆ ಹೋಗಿ ಗೂಗಲ್ ಹ್ಯಾಂಡ್‌ರೈಟಿಂಗ್ ಇನ್‌ಪುಟ್ಆಪ್‌ನ್ನು ಇನ್‌ಸ್ಟಾಲ್ ಮಾಡಿ. ನಂತರ ಇನ್‌ಸ್ಟಾಲ್ ಆದ ಆಪ್‌ಗೆ ಹೋಗಿ ಮೊದಲಿಗೆ ಈ ಸವಲತ್ತನ್ನು ಎನೇಬಲ್ಮಾಡಿ. ಅವಶ್ಯಕತೆಗೆ ಅನುಗುಣವಾಗಿ ಭಾಷಾಸವಲತ್ತುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಕನ್ನಡ ಭಾಷೆಯ ಸೌಲಭ್ಯ ಬೇಕಾದರೆ ಮೊಬೈಲಿನ ಭಾಷಾಪಟ್ಟಿಯಲ್ಲಿ ಮೊದಲಿಗೆ ಕನ್ನಡವನ್ನು ಆಯ್ಕೆ ಮಾಡಿಕೊಂಡು ನಂತರ ಡೌನ್‌ಲೋಡ್....ಒತ್ತಿ. ಕೆಲಸ ಮುಗಿದ ಸಂದೇಶ ಬಂದನಂತರ, ಎಲ್ಲವೂ ಸರಿಯಿದೆಯೇ ಎಂಬುದನ್ನು ತಿಳಿದುಕೊಳ್ಳಲು ಮತ್ತು ಕೈಬರಹ ಪ್ರಯತ್ನಿಸಲು ಅವಕಾಶ ಸಿಗುತ್ತದೆ. ರೈಟ್ ಹಿಯರ್ಎಂಬ ಸಂದೇಶದ ಕೆಳಗೆ ಪೆನ್‌ನಲ್ಲಿ ಬರೆಯುವಂತೆ ಕೈಬೆರಳನ್ನು ಬಳಸಿ ಕನ್ನಡ ಬರೆಯಿರಿ. ನೀವು ಬರೆಯುತ್ತಿದ್ದಂತೆ, ಮೇಲಿನ ಸಾಲಿನಲ್ಲಿ ನಿಮ್ಮ ಬರಹವು ಪಠ್ಯವಾಗಿ (ಟೆಕ್ಸ್ಟ್) ಆಗಿ ಬದಲಾಗುತ್ತದೆ. ಸರಿಯಿದ್ದರೆ ಮುಂದುವರೆಯಿರಿ. ತಪ್ಪಾಗಿದ್ದರೆ, ಅದರ ಕೆಳಗಿನ ಸಾಲಿನಲ್ಲಿ ಸರಿಯಿರಬಹುದಾದ ಮೂರು ಆಯ್ಕೆಗಳು ಕಂಡಬರುತ್ತವೆ. ಸರಿ ಎನಿಸಿದ್ದನ್ನು ಆಯ್ಕೆಮಾಡಿಕೊಂಡು ಮುಂದುವರೆಯಿರಿ. ಆರಂಭದಲ್ಲಿ ಸ್ವಲ್ಪ ಅಭ್ಯಾಸದ ಕಸರತ್ತು ಮಾಡುವುದು ಅಗತ್ಯ.

       ಈಗ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಎಲ್ಲೆಲ್ಲಿ ಪಠ್ಯ (ಟೆಕ್ಸ್ಟ್)  ಬಳಸಲು ಅವಕಾಶವಿದೆಯೋ ಅಲ್ಲೆಲ್ಲಾ ಕನ್ನಡವನ್ನು ಕೈಬರಹದ ಮೂಲಕ ಮೂಡಿಸಬಹುದು!. ವಾಟ್ಸ್‌ಆಪ್ ಮೆಸೇಜ್ ಬರೆಯಲು, ಇ-ಮೇಯ್ಲ್ ಉತ್ತರಿಸಲು, ಫೇಸ್‌ಬುಕ್ ಸ್ಟೇಟಸ್ ಅಪ್‌ಡೇಟ್ ಮಾಡಲು ಕನ್ನಡದಲ್ಲಿಯೇ ಸುಲಭವಾಗಿ ಬರೆಯಬಹುದು. ನಿಮ್ಮ ಬರವಣಿಗೆಯ ವೇಗಕ್ಕೆ ತಕ್ಕಂತೆ ಪಠ್ಯವು ಸಿದ್ಧಗೊಳ್ಳುತ್ತಾ ಹೋಗುತ್ತದೆ. ಟೈಪಿಂಗ್ ಕಿರಿಕಿರಿಯಿಂದ ನೀವು ಹೊರಬರುತ್ತೀರಿ. ಒತ್ತಕ್ಷರಗಳನ್ನು ಪ್ರತ್ಯೇಕವಾಗಿ ಬರೆದು ಮೂಡಿಸಲು ಪ್ರಯತ್ನಿಸಬೇಡಿ. ಪೂರ್ಣಾಕ್ಷರವನ್ನು ಬರೆದು ಕೈಬೆರಳನ್ನು ಎತ್ತುತ್ತಿದ್ದಂತೆ ಅದು ಪಠ್ಯವಾಗಿ ಮೂಡಿರುತ್ತದೆ. ಒಂದಕ್ಕಿಂತ ಹೆಚ್ಚಿನ ಒತ್ತಕ್ಷರಗಳ ಪೂಣಾಕ್ಷರಗಳನ್ನು ಮೂಡಿಸುವಲ್ಲಿ ಸ್ವಲ್ಪ ಕಸರತ್ತು ಮಾಡಬೇಕಿದೆ.  ಕೆಲವು ಗೊಂದಲಗಳು ಇವೆ. ಮುಂದೆ ಗೂಗಲ್‌ನವರು ಅದನ್ನು ಸರಿಪಡಿಸಬಹುದು.

       ಕನ್ನಡದೊಂದಿಗೆ ಮಧ್ಯೆಮಧ್ಯೆ ಇಂಗ್ಲಿಷ್ ಸಹ ಬಳಸಬಹುದು. ಭಾಷೆಯನ್ನು ಇಂಗ್ಲಿಷ್‌ಗೆ ಬದಲಿಸಲೇಬೇಕೆಂದೇನಿಲ್ಲ. ಕ್ಯಾಪಿಟಲ್ ಅಕ್ಷರಗಳನ್ನು ಬರೆದರೆ ಹಾಗೆಯೇ ಮೂಡುತ್ತವೆ. ಇಂಗ್ಲಿಷ್ ಮೆಸೇಜ್‌ಗಳನ್ನೇ ಬರೆಯಬೇಕಾದಾಗ ಮಾತ್ರವೇ ಭಾಷಾನಿಗದಿಗಳನ್ನು ಬದಲಿಸಿಕೊಳ್ಳಬಹುದು. ಸ್ಪೇಸ್‌ಬಾರ್‌ನಂತೆ ಬಳಸುವ ಬಟನ್‌ನ್ನು ದೀರ್ಘವಾಗಿ ಒತ್ತಿಹಿಡಿದರೆ ಅಗತ್ಯವಿರುವ ಭಾಷೆಯನ್ನು ಆಯ್ಕೆಮಾಡುವ ಅವಕಾಶವಿದೆ. ಹೀಗೆ ಬಳಕೆಯ ಭಾಷೆಗಳನ್ನು ಆಯ್ಕೆ (ಟಾಗಲ್) ಮಾಡುತ್ತಾ ಬೇರೆ ಬೇರೆ ಭಾಷೆಗಳನ್ನೂ ಸಹ ಬಳಸಿ ಕೈಬರಹದ ಮೂಲಕ ಮೆಸೇಜ್‌ಗಳನ್ನು ಮೂಡಿಸಬಹುದು.

       ನಿಮ್ಮ ಸ್ಮಾರ್ಟ್‌ಫೋನ್ ಎಷ್ಟು ಭಾಷೆಗಳಿಗೆ ಬೆಂಬಲನೀಡುತ್ತದೆಯೋ ಅಷ್ಟೂ ಭಾಷೆಗಳನ್ನು ನೀವು ಅಳವಡಿಸಿಕೊಳ್ಳಬಹುದು. ಇದಕ್ಕಾಗಿ ಆಪ್ಷನಲ್...ಎಂಬುದನ್ನು ಒತ್ತಿ. ಪ್ರತಿಬಾರಿ ಡೌನ್‌ಲೋಡ್ ಮಾಡಿದಾಗ ಮಾತ್ರವೇ ಆಯಾಯ ಭಾಷಾ ಸವಲತ್ತುಗಳು ಡೌನ್‌ಲೋಡ್ ಆಗುತ್ತವೆ. ನಿಮ್ಮ ಸ್ಮಾರ್ಟ್‌ಫೋನ್ ಡಿವೈಸ್‌ನ ಲಾಂಗ್ವೇಜ್ ಅಂಡ್ ಇನ್‌ಪುಟ್ಎಂಬಂತಹ ಸೆಟ್ಟಿಂಗ್‌ಗಳನ್ನು ನಿಗದಿಬೇಕಾದುದು ಅಗತ್ಯ.
      
       ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕಂಗ್ಲಿಷ್ ಬಳಕೆಯನ್ನು ನಿಲ್ಲಿಸಿ. ಇಂಗ್ಲಿಷ್ ಲಿಪಿಯಲ್ಲಿ ಕನ್ನಡವನ್ನು ಟೈಪಿಸುವುದಕ್ಕೆ ತಿಲಾಂಜಲಿ ನೀಡಿ. ಮುದ್ದಾದ ಕನ್ನಡ ಲಿಪಿಯಲ್ಲಿಯೆ ಕನ್ನಡ ಭಾಷೆಯನ್ನು ಬಳಸೋಣ. ಭಾಷಾಭಿಮಾನದಿಂದ ಕನ್ನಡದಲ್ಲಿಯೇ ಮೆಸೇಜ್ ಮಾಡಬೇಕೆಂದು ಕಷ್ಟಪಟ್ಟು ಟೈಪಿಂಗ್ ಮಾಡುವ ಕಸರತ್ತು ಇನ್ನು ಅಗತ್ಯವಿಲ್ಲ. ತಾಳ್ಮೆವಹಿಸಿ ಮಾಡಬೇಕಾದ ಟೈಪಿಂಗ್ ಅಥವಾ ಬೆರಳೊತ್ತುಗಳನ್ನು ಬಿಟ್ಟುಬಿಡಿ. ಸುಲಭವಾದ ಕೈಬರಹವನ್ನು ಆರಂಭಿಸಿ. ಒಪೆರಾ ಮೊಬೈಲ್ ಬ್ರೌಸರ್‌ನಲ್ಲಿ ಇಮೇಜ್ ಫೈಲ್‌ಗಳನ್ನು ಓದುವ ತಾಪತ್ರಯ ಇನ್ನಿಲ್ಲ. ನಿಮಗೆ ಬಂದ ಕನ್ನಡದ ಮೆಸೇಜ್‌ಗಳು ಚೌಕಾಕಾರದ ಡಬ್ಬಿಗಳಾಗಿ ಕಾಣುವ ಸಮಸ್ಯೆಗಳು ಇನ್ನಿಲ್ಲ. ಒತ್ತಕ್ಷರಗಳೇ ಮೂಡದೆ,  ಕನ್ನಡವನ್ನು ಓದಲಾಗದ ಬಿಡಿಬಿಡಿ ಅರ್ಧಾಕ್ಷರಗಳಲ್ಲಿ ಮೂಡುವ ಸಮಸ್ಯೆ ಇನ್ನಿಲ್ಲ.         



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...